ತಿರುವನಂತಪುರ: ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರು ತಿರುವನಂತಪುರ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಸಮುದಾಯ ಅಡಿಗೆಮನೆಗಳಿಗೆ ಭೇಟಿ ನೀಡಿ ಕೊರೋನಾ ರೋಗಿಗಳು ಮತ್ತು ಸಂಬಂಧಿಕರಿಗೆ ಆಹಾರವನ್ನು ತಲುಪಿಸಿದರು. ಅವರು ನೆಯ್ಯಾಟಿಂಗರ, ಕೋವಳಂ ಮತ್ತು ಬಾಲರಾಮಪುರಂನಲ್ಲಿರುವ ಸಮುದಾಯ ಅಡಿಗೆಮನೆಗಳಿಗೆ ಭೇಟಿ ನೀಡಿದರು ಮತ್ತು ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರೊಂದಿಗೆ ಆಹಾರ ತಯಾರಿ ಮತ್ತು ಆಹಾರ ಪಾರ್ಸೆಲ್ ಗಳನ್ನು ತಯಾರಿಸುವಲ್ಲಿ ನೇರವಾಗಿ ಪಾಲ್ಗೊಂಡರು.
ಕೊರೋನಾ ವಿಸ್ತರಣೆ ಮತ್ತು ಲಾಕ್ಡೌನ್ ಹಿನ್ನೆಲೆಯಲ್ಲಿ ತಿರುವನಂತಪುರ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಸಮುದಾಯ ಅಡಿಗೆಮನೆಗಳು ಈಗಾಗಲೇ ಗಮನ ಸೆಳೆದಿವೆ. ಕೊರೋನಾ ರೋಗಿಗಳು ಮತ್ತು ಸಂಬಂಧಿಕರಿಗೆ ಆಹಾರವನ್ನು ಒದಗಿಸಲು ಬಿಜೆಪಿ ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸುರೇಂದ್ರನ್ ಅವರ ಭೇಟಿ ಕಾರ್ಯಕರ್ತರಲ್ಲಿ ದ್ವಿಗುಣ ಶಕ್ತಿಯನ್ನು ನೀಡಿದೆ.ನೆಯ್ಯಾಟಿಂಗರದಲ್ಲಿ ಬಿಜೆಪಿಯ ಉಚಿತ ಆಂಬ್ಯುಲೆನ್ಸ್ ಸೇವೆ ಮತ್ತು ಉಚಿತ ಔಷಧ ವಿತರಣೆಗಳ ಚಟುವಟಿಕೆಗಳನ್ನು ಕೆ. ಸುರೇಂದ್ರನ್ ಅವಲೋಕನ ನಡೆಸಿದರು. ಇವೆರಡೂ ಅನುಕರಣೀಯ ಚಟುವಟಿಕೆಗಳಾಗಿವೆ ಎಂದರು. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರೆನೀಡಿರುವ ನಿರ್ದೇಶನದಂತೆ ದೇಶಾದ್ಯಂತ ಆಯೋಜಿಸಲಾಗಿರುವ ಸೇವಾಹಿ ಸಂಘಟನ್ (ಸರ್ವಿಸ್ ಈಸ್ ಆರ್ಗನೈಸೇಶನ್) ಅಂಗವಾಗಿ ಕೇರಳದಲ್ಲೂ ಬಿಜೆಪಿ ಸಕ್ರಿಯವಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ತಿರುವನಂತಪುರ ಜಿಲ್ಲಾಧ್ಯಕ್ಷ ವಿ.ವಿ.ರಾಜೇಶ್, ರಾಜ್ಯ ಕಾರ್ಯದರ್ಶಿ ಎಸ್. ಸುರೇಂದ್ರ ಮೊದಲಾದವರು ಇದ್ದರು







