HEALTH TIPS

ರಾಜ್ಯದಲ್ಲಿ ಎಮರ್ಜೆಂಸಿ ಲಾಕ್‍ಡೌನ್: ತೀವ್ರ ಎಚ್ಚರಿಕೆ ವಹಿಸುವಂತೆ ಸಿಎಂ ಒತ್ತಾಯ

                                            

             ತಿರುವನಂತಪುರ: ರಾಜ್ಯದಲ್ಲಿ ಎಮರ್ಜೆಂಸಿ ಹಂತದ ಲಾಕ್ ಡೌನ್ ಜಾರಿಯಲ್ಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೊದಲ ಲಾಕ್‍ಡೌನ್ ಮತ್ತು ಪ್ರಸ್ತುತ ಲಾಕ್‍ಡೌನ್ ನಡುವೆ ವ್ಯತ್ಯಾಸಗಳಿವೆ ಎಂದು ಸಿಎಂ ಹೇಳಿದರು. ದೈನಂದಿನ ಕೊರೋನಾ ಪರಿಶೀಲನೆಯ ಬಳಿಕ ನಿನ್ನೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.


                    ಮೊದಲ ಹಂತದ ಲಾಕ್‍ಡೌನ್ ಸೋಂಕು ತಡೆಗಟ್ಟುವ ಲಾಕ್‍ಡೌನ್ ಆಗಿತ್ತು. ಆ ಸಂದರ್ಭ, ಸೋಂಕು ಮುಖ್ಯವಾಗಿ ಬಾಹ್ಯವಾಗಿತ್ತು. ಆ ಲಾಕ್‍ಡೌನ್ ಸಮುದಾಯದ ವ್ಯಾಪ್ತಿಯನ್ನು ಕಡಿಮೆ ಮಾಡಲು ಪ್ರಯತ್ನಿಸಿತು. ಆದರೆ ಈಗ ತುರ್ತು ಲಾಕ್‍ಡೌನ್ ಜಾರಿಗೆ ತರಲಾಗುತ್ತಿದೆ. ಸ್ಥಳೀಯ ಸಂಪರ್ಕದಿಂದಾಗಿ ಕೊರೋನಾ ಸೋಂಕು ಈಗ ಹೆಚ್ಚಳಗೊಳ್ಳುತ್ತಿದೆ. ಲಾಕ್ ಡೌನ್ ಹೇರಿರುವ ಮುಖ್ಯ ಲಕ್ಷ್ಯ ಸಾವುಗಳನ್ನು ಕಡಿಮೆ ಮಾಡುವುದು ಎಂದು ಸಿಎಂ ಹೇಳಿದರು.

                    ಒಬ್ಬರ ಸ್ವಂತ ಸುರಕ್ಷತೆ ಮತ್ತು ಪ್ರೀತಿಪಾತ್ರರ ಸುರಕ್ಷತೆಗಾಗಿ ಲಾಕ್‍ಡೌನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಬೇಕು. ಎರಡನೇ ತರಂಗ ತೀವ್ರಗೊಳ್ಳುತ್ತಿದ್ದಂತೆ, ಹೆಚ್ಚು ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಡಬಲ್ ಮಾಸ್ಕಿಂಗ್, ಅಥವಾ ಎನ್ 95 ಮಾಸ್ಕ್ ಗಳನ್ನು ಎಲ್ಲರೂ ಅಭ್ಯಾಸ ಮಾಡಬೇಕು, ಅಂತರ ಕಾಪಿಡುವುದು ಮತ್ತು ಕೈಗಳನ್ನು ಸ್ವಚ್ಚವಾಗಿರಿಸಿಕೊಳ್ಳುವುದೂ ಅಗತ್ಯ. ಸ್ಥಳಗಳನ್ನು ಜನದಟ್ಟಣೆಗೊಳಗಾಗದಂತೆ ಮುಚ್ಚಿಡುವುದು,  ಜನಸಂದಣಿ ಮತ್ತು ನಿಕಟ ಸಂಪರ್ಕವನ್ನು ತಡೆಹಿಡಿಯಲು ವಿಶೇಷ ಕಾಳಜಿ ವಹಿಸಬೇಕು ಎಂದು ಸಿಎಂ ನಿರ್ದೇಶÀನ ನೀಡಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries