HEALTH TIPS

ಚಿನ್ನ ಕಳ್ಳಸಾಗಣೆಗೆ ಕೇಂದ್ರಗಳಾಗಿ ಮಾರ್ಪಟ್ಟ ರಾಜ್ಯದ ವಿಮಾನ ನಿಲ್ದಾಣಗಳು: ಕಣ್ಣೂರಿನಲ್ಲಿ 75 ಲಕ್ಷ ರೂ.ಗಳ ಚಿನ್ನ ವಶ

                ಕಣ್ಣೂರು: ಕಣ್ಣೂರು ವಿಮಾನ ನಿಲ್ದಾಣದಲ್ಲಿ ದೊಡ್ಡ ಪ್ರಮಾಣದ ಚಿನ್ನ ಬೇಟೆ ನಿನ್ನೆ ನಡೆದಿದೆ. ಕಳ್ಳಸಾಗಣೆ ವೇಳೆ 1514 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ ಘಟನೆಯಲ್ಲಿ ಕೂತುಪರಂಬ ಮನಂದೇರಿ ಮೂಲದ ಪಿ.ಪಿ.ಶಮ್ನಾಸ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

                     ಆತನಿಂದ ವಶಪಡಿಸಿಕೊಂಡ ಚಿನ್ನದ ಮೌಲ್ಯ ಮಾರುಕಟ್ಟೆಯಲ್ಲಿ 75 ಲಕ್ಷ ರೂ. ಅವರು ದುಬೈನಿಂದ ಕಣ್ಣೂರಿಗೆ ಆಗಮಿಸಿದ್ದು,  ವಿವರವಾಗಿ ಪ್ರಶ್ನಿಸಲಾಗುತ್ತಿದೆ.

         ಸೋಮವಾರ ನೆಡುಂಬಾಶ್ಚೇರಿ ಮತ್ತು ಕರಿಪುರ್ ವಿಮಾನ ನಿಲ್ದಾಣಗಳಿಂದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ನೆಡುಂಬಾಶ್ಚೇರಿಯಿಂದ ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಮಲಪ್ಪುರಂ ನಿವಾಸಿಯನ್ನು ಬಂಧಿಸಲಾಗಿದೆ. 

               ಕರಿಪುರ್  ವಿಮಾನ ನಿಲ್ದಾಣದಿಂದ ಬೆಳಿಗ್ಗೆ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಎರಡು ಕಿಲೋಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಮಲಪ್ಪುರಂ ನಿವಾಸಿಯನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಏತನ್ಮಧ್ಯೆ, ಚಿನ್ನ ಪಡೆಯಲು ಕರಿಪುರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಚೆರ್ಪುಲಶೇರಿಯ ಗುಂಪೆÇಂದು ರಸ್ತೆ ಅಪಘಾತದಲ್ಲಿ ಸಿಲುಕಿದ್ದು, ಐವರು ಸಾವನ್ನಪ್ಪಿದ್ದಾರೆ. ಪೋಸರು ತನಿಖೆ ನಡೆಸುತ್ತಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries