ಬದಿಯಡ್ಕ: ವಿಶ್ವಹಿಂದು ಪರಿಷತ್ ಮಂಗಳೂರು ಗ್ರಾಮಾಂತರ ಕಾಸರಗೋಡು ಜಿಲ್ಲೆಯ ವತಿಯಿಂದ ಫಲವಸ್ತು ಗಳ ಸಸಿಗಳನ್ನು ಮನೆ ಮನೆಗಳಿಗೆ ವಿತರಿಸಿ ನೆಡಲಾಯಿತು. ಕಾಸರಗೊಡು ವಲಯದ ವತಯಿಂದ ಎಡನೀರು ಮಠದಲಿ ನಡೆದ ಕಾರ್ಯಕ್ರಮದಲ್ಲಿ ವಲಯದ ಕಾರ್ಯದರ್ಶಿ ರವಿ ಎಡನೀರು ಆದ್ಯಕ್ಷತೆ ವಹಿಸಿದರು. ಮಠದ ಪ್ರಬಂಧಕ ವೇಣುಗೋಪಾಲ್ ರವರು ಸಸಿಗಳನು ವಿತರಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಮಾತನಾಡಿ ಫಲವಸ್ತುಗಳನ್ನು ಬೇಳೆಸುವುದರಿಂದ ಎಲ್ಲಾ ಜೀವ ರಾಶಿಗಳಿಗೆ ಆಹಾರ ದೊರಕಿದಂತಾಗುವುದು ಎಂದರು ಮಂಜೇಶ್ವರ ಪ್ರಖಂಡದ ಕಾರ್ಯದರ್ಶಿ ಜನಾರ್ಧನ ಆಚಾರ್ಯ, ಸಂತೋಷ್ ಕೆ, ಶಿವಪ್ರಸಾದ್ ಎಡನೀರು ಉಪಸ್ಥಿತರಿದ್ದರು.