HEALTH TIPS

ರಾಜ್ಯದಲ್ಲಿ ಇಂದು 13,750 ಮಂದಿ ಜನರಿಗೆ ಕೋವಿಡ್ ಪತ್ತೆ: 10,697 ಮಂದಿ ಗುಣಮುಖ: ಪರೀಕ್ಷಾ ಸಕಾರಾತ್ಮಕ ದರ ಶೇ.10.55

                     ತಿರುವನಂತಪುರಂ: ರಾಜ್ಯದಲ್ಲಿ ಇಂದು 13,750 ಮಂದಿ ಜನರಿಗೆ ಕೋವಿಡ್ ಪತ್ತೆಹಚ್ಚಲಾಗಿದೆ. ಕೋಝಿಕೋಡ್ 1782, ಮಲಪ್ಪುರಂ 1763, ತ್ರಿಶೂರ್ 1558, ಎರ್ನಾಕುಳಂ 1352, ಕೊಲ್ಲಂ 1296, ತಿರುವನಂತಪುರ 1020, ಪಾಲಕ್ಕಾಡ್ 966, ಕೊಟ್ಟಾಯಂ 800, ಆಲಪ್ಪುಳ 750, ಕಾಸರಗೋಡು 726, ಕಣ್ಣೂರು 719, ಪತ್ತನಂತಿಟ್ಟು 372, ವಯನಾಡ್ 345, ಇಡುಕ್ಕಿ 301 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

            ಗುಂಪು ಪರೀಕ್ಷೆ ಸೇರಿದಂತೆ ಕಳೆದ 24 ಗಂಟೆಗಳಲ್ಲಿ ಒಟ್ಟು 1,30,390 ಮಾದರಿಗಳನ್ನು ಪರೀಕ್ಷಿಸಲಾಯಿತು. ಮುಂದಿನ ದಿನಗಳಲ್ಲಿ ಗುಂಪು ಪರೀಕ್ಷೆಗಳ ಹೆಚ್ಚಿನ ಫಲಿತಾಂಶಗಳು ಬರಲಿವೆ. ಪರೀಕ್ಷಾ ಸಕಾರಾತ್ಮಕತೆ ಪ್ರಮಾಣ ಶೇ.10.55 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,50,60,933 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

               ಕಳೆದ 24 ಗಂಟೆಗಳಲ್ಲಿ 130 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.  ಒಟ್ಟು ಸಾವಿನ ಸಂಖ್ಯೆ 15,155 ಕ್ಕೆ ಏರಿಕೆಯಾಗಿದೆ.

         ಇಂದು, ಸೋಂಕು ನಿರ್ಣಯ ಮಾಡಿದವರಲ್ಲಿ 63 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ ಒಟ್ಟು 12,884 ಜನರಿಗೆ ಸೋಂಕು ತಗುಲಿತು. 725 ಮಂದಿಯ  ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ 1756, ಮಲಪ್ಪುರಂ 1718, ತ್ರಿಶೂರ್ 1543, ಎರ್ನಾಕುಳಂ 1310, ಕೊಲ್ಲಂ 1292, ತಿರುವನಂತಪುರ 915, ಪಾಲಕ್ಕಾಡ್ 541, ಕೊಟ್ಟಾಯಂ 764, ಆಲಪ್ಪುಳ 724, ಕಾಸರಗೋಡು 706, ಕಣ್ಣೂರು 623, ಪತ್ತನಂತಿಟ್ಟು 362, ವಯನಾಡ್ 338, ಇಡುಕ್ಕಿ 292 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

                 ಇಂದು 78 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 24, ಕಾಸರಗೋಡು 15, ತ್ರಿಶೂರ್ 9, ಪಾಲಕ್ಕಾಡ್ 5, ಪತ್ತನಂತಿಟ್ಟು, ಕೋಝಿಕೋಡ್ ತಲಾ 4, ಕೊಲ್ಲಂ, ಎರ್ನಾಕುಳಂ, ಮಲಪ್ಪುರಂ ತಲಾ 3, ತಿರುವನಂತಪುರ, ಆಲಪ್ಪುಳ, ವಯನಾಡ್ ತಲಾ 2, ಕೊಟ್ಟಾಯಂ ಮತ್ತು ಇಡುಕಿ ತಲಾ 1 ಎಂಬಂತೆ ಸೋಂಕು ಕಂಡುಬಂದಿದೆ.

              ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 10,697 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1012, ಕೊಲ್ಲಂ 993, ಪತ್ತನಂತಿಟ್ಟು 303, ಆಲಪ್ಪುಳ 632, ಕೊಟ್ಟಾಯಂ 739, ಇಡುಕ್ಕಿ 238, ಎರ್ನಾಕುಳಂ 708, ತ್ರಿಶೂರ್ 1551, ಪಾಲಕ್ಕಾಡ್ 858, ಮಲಪ್ಪುರಂ 1054, ಕೋಝಿಕೋಡ್ 761, ವಯನಾಡ್ 164, ಕಣ್ಣೂರು 1072, ಕಾಸರಗೋಡು 612 ಎಂಬಂತೆ ಗುಣಮುಖರಾಗಿದ್ದಾರೆ.  ಇದರೊಂದಿಗೆ 1,21,944 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 29,93,242 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.

                 ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,97,164 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,72,317 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ  ಮತ್ತು 24,847 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 2254 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

              ಟಿಪಿಆರ್ 5ಕ್ಕಿಂತ ಕೆಳಗೆ 83, 5 ರಿಂದ 10 ರ ನಡುವೆ 384, ಟಿಪಿಆರ್. 10 ರಿಂದ 15 ರ ನಡುವೆ 362, ಟಿಪಿಆರ್. 15 ಕ್ಕಿಂತ ಮೇಲೆ  205 ಸ್ಥಳೀಯಾಡಳಿತ ಸಂಸ್ಥೆಗಳು ಇವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries