HEALTH TIPS

ಅಕ್ರಮ ಮರಮಟ್ಟು ಮಾರಾಟ: ತೆರೆಮರೆಯಲ್ಲಿ ರೈತರನ್ನು ಬಲಿಪಶುಗಳಾಗಿಸಲು ಬಿಡೆವು: ರಾಷ್ಟ್ರೀಯ ಕಿಸಾನ್ ಮಹಾಸಂಘ್

               ತೊಡುಪುಳ: ಕಾನೂನುಬಾಹಿರವಾಗಿ ಮರಮಟ್ಟುಗಳ ಅವ್ಯವಹಾರ ಇಂದು ನಿನ್ನೆಯದಲ್ಲ. ಇದರ ಹಿಂದೆ ದೊಡ್ಡ ಅರಣ್ಯ ಮಾಫಿಯಾ ಗುಂಪುಗಳ ದೊಡ್ಡ ಪಿತೂರಿ ಇದೆ. ಆದ್ದರಿಂದ, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಅರಣ್ಯ ಇಲಾಖೆಯ ಅರಣ್ಯ ದರೋಡೆ ಬಹಿರಂಗಗೊಂಡಾಗ ಬಡ ರೈತರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಮೂಲಕ ಅವರನ್ನು ಬಲಿಪಶುಗಳಾಗಿಸಲು ಪ್ರಯತ್ನಿಸುವ ದೌರ್ಜನ್ಯವನ್ನು ಅನುಮತಿಸಲಾಗುವುದಿಲ್ಲ ಎಂದು ರಾಷ್ಟ್ರೀಯ ಕಿಸಾನ್ ಮಹಾಸಂಘ್ ಎಚ್ಚರಿಸಿದೆ.

              2020 ರ ಅಕ್ಟೋಬರ್ 24 ರಂದು ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ. ಆದೇಶವು ವಿವಾದಾಸ್ಪದವಾಗಿದ್ದರೆ, ಅಧಿಕಾರಿಗಳೇ  ಜವಾಬ್ದಾರರು; ರೈತರಲ್ಲ. ರೈತರು ತಮ್ಮ ಸ್ವಂತ ಜಮೀನಿನಲ್ಲಿ ಮರಗಳನ್ನು ನೆಡುವ ಮತ್ತು ಕತ್ತರಿಸುವ ಹಕ್ಕನ್ನು ಹೊಂದಿದ್ದಾರೆ. ಅಪರಾಧಿ ಮೇಲ್ವರ್ಗದ ಅಧಿಕಾರಿಗಳನ್ನು ರಕ್ಷಿಸಲು ರೈತರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಮತ್ತು ರೈತರ ಚಳುವಳಿಗಳನ್ನು ಯಾವುದೇ ವೆಚ್ಚ ಭರಿಸಿ ಸಂಘಟಿಸಿ ವಿರೋಧಿಸುತ್ತವೆ ಎಂದು ರಾಷ್ಟ್ರೀಯ ಕಿಸಾನ್ ಮಹಾಸಂಘ್ ರಾಜ್ಯಾಧ್ಯಕ್ಷ  ವಿಸಿ ಸೆಬಾಸ್ಟಿಯನ್ ಹೇಳಿರುವರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries