HEALTH TIPS

ದಯವಿಟ್ಟು ನನಗೆ ಚಿನ್ನ ಬೇಡ: ಮದುವೆಯಲ್ಲಿ ವರದಕ್ಷಿಣೆ ವಿರೋಧಿ ಹೇಳಿಕೆ ನೀಡಿ ಮಾದರಿಯಾದ ಯುವಕ!

                ಆಲಪ್ಪುಳ: ಕೇವಲ ಎರಡು ದಿನಗಳ ಅಂತರದಲ್ಲಿ ಕೇರಳದ ಮೂವರು ಯುವತಿಯರು ವರದಕ್ಷಿಣೆ ಕಿರುಕುಳಕ್ಕೆ ಮೃತಪಟ್ಟ ಘಟನೆ ಸಾಕ್ಷರತಾ ನಾಡು ಕೇರಳದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿತು. ಮಾನವನ ದುರಾಸೆಯಿಂದ ಮೂವರು ಅಮಾಯಕರ ಪ್ರಾಣವೇ ಹೋಯಿತು. ಈ ಘಟನೆಯಿಂದ ಹೆಣ್ಣು ಮಕ್ಕಳನ್ನು ಹೆತ್ತ ಪಾಲಕರು ಆತಂಕಕ್ಕೀಡಾಗಿರುವುದಲ್ಲದೇ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೆ ದೂಡಿದೆ. ಆದರೆ, ಆಲಪ್ಪುಳದಲ್ಲಿ ಗುರುವಾರ ನಡೆದ ಮದುವೆಯೊಂದು ಹೆಣ್ಣು ಹೆತ್ತ ಪಾಲಕರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

          ನಿನ್ನೆ ನಡೆದ ಸತೀಶ್​ ಸತ್ಯಾನ್​ ಮತ್ತು ಶ್ರುತಿ ರಾಜ್​ ಮದುವೆಯಲ್ಲಿ ಸಮಾಜಕ್ಕೆ ಒಂದು ಬಲವಾದ ಸಂದೇಶವನ್ನು ರವಾನಿಸಲಾಗಿದೆ. ವರ ಸತೀಶ್​ ನನಗೆ ಚಿನ್ನ ಬೇಡ ಎಂದು ವಧುವಿನ ಕುಟುಂಬಕ್ಕೆ ಹಿಂತಿರುಗಿಸಿ ಎಲ್ಲರು ತನ್ನ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಮೂಲಕ ಕೇರಳದಲ್ಲಿ ಹೊಸ ಪದ್ಧತಿಗೆ ಸತೀಶ್​ ನಾಂದಿ ಆಡಿದ್ದಾರೆ.

            ಅಂದಹಾಗೆ ಸತೀಶ್​ ಸತ್ಯನ್​ ಮತ್ತು ಶ್ರುತಿ ರಾಜ್​ ಪಣಯಿಲ್​ ದೇವಿ ದೇವಸ್ಥಾನದಲ್ಲಿ ಗುರುವಾರ ಸಪ್ತಪದಿ ತುಳಿದಿದ್ದಾರೆ. ಮದುವೆ ಮುಗಿದ ಬಳಿಕ ವರ ಸತೀಶ್​ ಮತ್ತು ಅವರ ತಂದೆ ಸತ್ಯನ್​, ವಧು ಧರಿಸಿದ್ದ ಚಿನ್ನಾಭರಣಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಅವರ ಕುಟುಂಬಕ್ಕೆ ಹಿಂತಿರುಗಿಸಿದ್ದಾರೆ.

ಸತೀಶ್​ ನೂರನಾಡ್​​ ಪಲ್ಲಿಕಲ್​ ನಿವಾಸಿ ಕೆ.ವಿ. ಸತ್ಯನ್​ ಮತ್ತು ಜಿ ಸರಸ್ವತಿ ಅವರ ಪುತ್ರ. ಶ್ರುತಿ ರಾಜ್​ ನೂರನಾಡ್​ ಪಣಯಿಲ್​ ನಿವಾಸಿ ಆರ್​. ರಾಜೇಂದ್ರನ್​ ಮತ್ತು ಪಿ ಶೀಲಾ ಅವರು ಮಗಳು. ಕೋವಿಡ್​ ಶಿಷ್ಟಾಚಾರದಂತೆ ನಡೆದ ಮದುವೆಯಲ್ಲಿ ಆಪ್ತ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries