HEALTH TIPS

ಕೈಟೆಕ್ಸ್ ಹೂಡಿಕೆ ವಿವಾದ: ಗಾಯಕ್ಕೆ ಮುಲಾಮು: ಉದ್ಯಮ ಸ್ನೇಹೀ ರಾಜ್ಯವಾಗಿಸಲು ಹೊಸ ಕಾನೂನು ಬರಲಿದೆ ಎಂದ ರಾಜ್ಯ ಕೈಗಾರಿಕಾ ಸಚಿವ

                   ತಿರುವನಂತಪುರ: ರಾಜ್ಯದ ಕೈಗಾರಿಕೆಗಳನ್ನು ಸಂರಕ್ಷಿಸಲು ಹೊಸ ಮಸೂದೆಯನ್ನು ತರಲಾಗುವುದು ಎಂದು ಕೈಗಾರಿಕಾ ಸಚಿವ ರಾಜೀವ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೊಸ ಕ್ರಮವು ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣವನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ. ಏತನ್ಮಧ್ಯೆ, ಈ ಕ್ರಮವು ಕೈಟೆಕ್ಸ್ ನಿಂದಾದ ಮಾನಹಾನಿಗೆ ತೇಪೆ ಹಾಕುವ ಯತ್ನ ಎಂದು ಆರೋಪಿಸಲಾಗಿದೆ

               ಕೈಗಾರಿಕೆಗಳಿಗೆ ಅಡ್ಡಿಯುಂಟುಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಈ ಮಸೂದೆ ಅವಕಾಶ ನೀಡುತ್ತದೆ. ಸ್ಥಿರ ಹೂಡಿಕೆಗಿಂತ ಹೆಚ್ಚಿನ ಹೂಡಿಕೆ ಮಾಡುವ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು. ಅವರು ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲಾ ಇಲಾಖೆಗಳು ಅನುಮೋದಿಸಬೇಕಾಗುತ್ತದೆ. ಇದರೊಂದಿಗೆ ಉದ್ಯಮದ ಕುಂದುಕೊರತೆಗಳನ್ನು ಪರಿಹರಿಸಲಾಗುವುದು ಮತ್ತು ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಮುಂದಿನ ವಿಧಾನಸಭೆ ಅಧಿವೇಶನದಲ್ಲಿಯೇ ಮಸೂದೆಯನ್ನು ಪರಿಚಯಿಸಲಾಗುವುದು ಎಂದು ರಾಜೀವ್ ಹೇಳಿರುವರು.

                    ರಾಜ್ಯ ಸರ್ಕಾರದೊಂದಿಗೆ ಜಾರಿಗೆ ತರಬೇಕಾದ 3,500 ಕೋಟಿ ರೂ.ಗಳ ಮೆಗಾ ಯೋಜನೆಯನ್ನು ಕೈಟೆಕ್ಸ್ ಗ್ರೂಪ್ ಹಿಂಪಡೆದಿದೆ. ಕಂಪನಿಯು ಒಂದು ತಿಂಗಳಲ್ಲಿ 11 ತಪಾಸಣೆಗೊಳಗಾಗಿದ್ದು, ್ತ ಸರ್ಕಾರ ಮತ್ತು ರಾಜಕೀಯ ನಾಯಕತ್ವವು ಉದ್ಯಮಿಗಳಿಗೆ ಕಿರುಕುಳ ನೀಡುತ್ತಿದೆ ಎಂದು ಕೈಯಟೆಕ್ಸ್ ಎಂಡಿ ಸಾಬು ಜಾಕೋಬ್ ಆರೋಪಿಸಿದ್ದರು. ಈ ವಿಷಯದಲ್ಲಿ ಸರ್ಕಾರ ಗಮನಾರ್ಹವಾಗಿ ಯಾವುದೇ ಕ್ರಮಕ್ಕೂ ಮುಂದಾಗಲಿಲ್ಲ. ಇದರ ಬೆನ್ನಲ್ಲೇ, ಕೈಟ್‍ಕ್ಸ್ ತೆಲಂಗಾಣ ಸರ್ಕಾರದೊಂದಿಗೆ 1,000 ಕೋಟಿ ರೂ.ಗಳ ಹೂಡಿಕೆ ಯೋಜನೆಗಾಗಿ ಹೂಡಿಕೆ ಒಪ್ಪಂದ ಮಾಡಿಕೊಂಡಿತು. 35,000 ಜನರಿಗೆ ಉದ್ಯೋಗ ನೀಡುವ ಯೋಜನೆಯನ್ನು ಕೇರಳದ ಪಿಣರಾಯಿ ಸರ್ಕಾರ ತನ್ನ ಕೈಯಾರೆ  ಕಳೆದುಕೊಂಡಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries