ತಿರುವನಂತಪುರ: ಸಿಪಿಎಂ ಅಂಗಸಂಸ್ಥೆ ಐಎನ್ ಎಲ್ ವಿವಾದ, ಕರಿವಣ್ಣೂರ್ ಕೋ-ಆಪರೇಟಿವ್ ಬ್ಯಾಂಕ್ ಹಗರಣ ಸೇರಿದಂತೆ ಗಮನಾರ್ಹ ಸಮಸ್ಯೆಗಳು ಇಂದಿನ ವಿಧಾನಸಭೆ ಅಧಿವೇಶನದಲ್ಲಿ ಕಾವೇರುವ ಸಾಧ್ಯತೆಗಳಿವೆ. ಸದನದಲ್ಲಿ ಈ ರೀತಿಯ ವಿಷಯಗಳಲ್ಲಿ ಪ್ರತಿಪಕ್ಷಗಳು ಆಡಳಿತ ಪಕ್ಷಕ್ಕೆ ಸಹಾಯ ಮಾಡುತ್ತಿವೆ ಎಂಬ ಆರೋಪ ಬಲವಾಗಿದೆ.
ಉನ್ನತ ನಾಯಕರ ನೇತೃತ್ವದಲ್ಲಿ ಸಿಪಿಎಂ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದೆ ಆದರೆ ಪ್ರತಿಪಕ್ಷಗಳು ಅದನ್ನು ರಾಜಕೀಯ ಅಸ್ರ್ತವಾಗಿ ಸಮರ್ಥತೆಯಿಂದ ಬಳಸಲಿಲ್ಲ ಎಂದು ಆರೋಪಿಸಲಾಗಿದೆ. ಈ ಪರಿಸ್ಥಿತಿಯಲ್ಲಿ, ಈ ವಿಷಯವನ್ನು ಮತ್ತೆ ಸದನದಲ್ಲಿ ಮೊಳಗಿಸಲು ಪ್ರತಿಪಕ್ಷಗಳಲ್ಲಿ ಬಲವಾದ ಬೇಡಿಕೆಯಿದೆ.




