HEALTH TIPS

ಖಾಸಗಿ ಬಸ್ ವಲಯದ ನಿರ್ವಾಹಕರನ್ನು ಸಂಕಷ್ಟದಿಂದ ರಕ್ಷಿಸಲು ಒತ್ತಾಯಿಸಿ ಉಪವಾಸ ಸತ್ಯಾಗ್ರಹ: ತಕ್ಷಣದ ಕ್ರಮಕ್ಕೆ ಆಗ್ರಹ

          ಪತ್ತನಂತಿಟ್ಟು: ಖಾಸಗಿ ಬಸ್ ಮಾಲೀಕರು ಸ|ಂಕಷ್ಟದಿಂದ ಕಂಗಾಲಾಗಿದ್ದಾರೆ. ಖಾಸಗಿ ಬಸ್ ವಲಯವನ್ನು ಸಂರಕ್ಷಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯದಾದ್ಯಂತ ಇಂದು ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ಕೇರಳ ರಾಜ್ಯ ಖಾಸಗಿ ಬಸ್ ನಿರ್ವಾಹಕರ ಒಕ್ಕೂಟ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ. 

            ಮೂರು ಹಂತಗಳಲ್ಲಿ ರಸ್ತೆ ತೆರಿಗೆಯಿಂದ ವಿನಾಯಿತಿ ಹೊರತು ಬೇರೆ ಯಾವುದೇ ನೆರವನ್ನೂ ಸರ್ಕಾರ ಈವರೆಗೆ ಘೋಷಿಸಿಲ್ಲ. ಕೋವಿಡ್ ನ ಎರಡನೇ ತರಂಗವನ್ನು ಅನುಸರಿಸಿ ಲಾಕ್ಡೌನ್ ಬಳಿಕ  ತೆರಿಗೆ ವಿನಾಯಿತಿ ಇಲ್ಲದೆ ಪಾವತಿಸುವ ದಿನಾಂಕವನ್ನು ವಿಸ್ತರಿಸುವ ವಿಷಯದ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. 

              ದರವನ್ನು ಹೆಚ್ಚಿಸಲು ಸರ್ಕಾರ ನೇಮಿಸಿದ ಜಸ್ಟೀಸ್ ರಾಮಚಂದ್ರನ್ ಆಯೋಗ ಇದೇ ವಿಷಯದ ಬಗ್ಗೆ ಕಳೆದ ವರ್ಷ ಸಮಗ್ರ ವರದಿ ನೀಡಿಯೂ ಸರ್ಕಾರ ಮೌನದಿಂದಿದೆ. ಕೋವಿಡ್ ನಿಬಂಧನೆಗಳ ಅಂತ್ಯದವರೆಗೆ ಬಸ್ಸುಗಳ ದ್|ಐನಂದಿನ ಖರ್ಚು ವೆಚ್ಚಗಳಿಗೆ ್ಕ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಬಸ್ ಶುಲ್ಕ. ತೆರಿಗೆ ವಿನಾಯಿತಿಯನ್ನು ವರದಿಯು ಶಿಫಾರಸು ಮಾಡುತ್ತದೆ. ಈಗ ನಿಲುಗಡೆಗೊಂಡಿರುವ ಹೆಚ್ಚಿನ ಬಸ್‍ಗಳಲ್ಲಿ ಡೀಸೆಲ್ ಖರೀದಿಸಲು ಹಣವಿಲ್ಲ. ನೌಕರರಿಗೆ ಸಂಬಳವನ್ನು ಸಹ ನೀಡದಿರುವ ಪರಿಸ್ಥಿತಿ ಇದೆ. 140 ಕಿ.ಮೀ ಗಿಂತ ಹೆಚ್ಚು ದೂರ ಸಂಚರಿಸುವ ಖಾಸಗಿ ಬಸ್‍ಗಳಿಗೆ ಪರವಾನಗಿಗಳು ನವೀಕರಿಸದಂತಹ ಪರಿಸ್ಥಿತಿಯೂ ಇದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries