HEALTH TIPS

ಶಬರಿಮಲೆ, ಮಾಳಿಗಪ್ಪುರಂ ದೇವಾಲಯಗಳಿಗೆ ಮೆಲ್ಶಾಂತಿ ನೇಮಕಾತಿ: ಮಲಯಾಳ ಬ್ರಾಹ್ಮಣರಿಗೆ ಮಾತ್ರ ಮೀಸಲಾತಿ ವಿರುದ್ಧ ಹೈಕೋರ್ಟ್‍ನಲ್ಲಿ ಅರ್ಜಿ

                ಕೊಚ್ಚಿ: ಶಬರಿಮಲೆ ಮತ್ತು ಮಾಳಿಗಪ್ಪುರಂ ದೇವಾಲಯಗಳಿಗೆ ಮಲಯಾಳಿ ಬ್ರಾಹ್ಮಣರನ್ನು ಮಾತ್ರ ಅರ್ಚಕ ಹುದ್ದೆ ಮೀಸಲಾಗಿರುವ ಬಗ್ಗೆ  ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕೊಟ್ಟಾಯಂ ಮೂಲದ ಸಿ.ವಿ ವಿಷ್ಣು ನಾರಾಯಣನ್ ಅವರು ಅರ್ಜಿಯೊಂದನ್ನು  ಹೈಕೋರ್ಟ್‍ಗೆ ನಿನ್ನೆ ಸಲ್ಲಿಸಿದ್ದಾರೆ.  ಅರ್ಜಿಯಲ್ಲಿ, ವಿಷ್ಣು ಸಮುದಾಯವನ್ನು ಲೆಕ್ಕಿಸದೆ ಅರ್ಹರಾದವರಲ್ಲಿ ಮೆಲ್ಶಾಂತಿಯನ್ನು ನೇಮಿಸಲು ನಿರ್ದೇಶನಗಳನ್ನು ಕೋರಲಾಗಿದೆ. 

               ಮಲಯಾಳಂ ಬ್ರಾಹ್ಮಣರಿಗೆ ಮಾತ್ರ ಮೆಲ್ಶಾಂತಿಯ ನೇಮಕಾತಿ  ಕಾಯ್ದಿರಿಸುವುದು ಅಸಂವಿಧಾನಿಕ. ಇಂತಹ ಅಸಂವಿಧಾನಿಕ ಕ್ರಮವನ್ನು ಸರ್ಕಾರದ ನಿಯಂತ್ರಿತ ದೇವಸ್ವಂ ಮಂಡಳಿ ಆಚರಿಸುತ್ತಿದೆ.  ಮೆಲ್ಶಾಂತಿಯ ನೇಮಕಾತಿಯನ್ನು ಯಾವುದೇ ಸಮುದಾಯಕ್ಕೆ ಮಾತ್ರ ಮೀಸಲಿಡಬಾರÀದು  ಎಂದು ಅರ್ಜಿದಾರರು ಸೂಚಿಸುತ್ತಾರೆ.

              ತಿರುವಾಂಕೂರು ದೇವಸ್ವಂ ಶುಕ್ರವಾರ ಮಲಯಾಳ ಬ್ರಾಹ್ಮಣರಿಂದ ಶಬರಿಮಲೆ ಮತ್ತು ಮಾಳಿಗಪ್ಪುರಕ್ಕೆ ಮೆಲ್ಶಾಂತಿಯವರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು. ಆದರೆ ವಿಷ್ಣು ನಾರಾಯಣ್ ಅವರು ಮಲಯಾಳ ಬ್ರಾಹ್ಮಣರು ಎಂಬುದನ್ನು ಹೊರತುಪಡಿಸಿ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries