ತ್ರಿಶೂರ್: ಗುರುವಾಯೂರ್ ದೇವಸ್ಥಾನದಲ್ಲಿ ಭಕ್ತರಿಗೆ ಗೋಪುರದ ಮುಂದೆ ಪ್ರಾರ್ಥನೆ ಮಾಡಲು ಅನುಮತಿ ನೀಡಲಾಗುವುದು. ಪೂರ್ವ ದಿಕ್ಕಿನಲ್ಲಿರುವ ಲೈಟ್ ಹೌಸ್ ಮತ್ತು ಗೇಟ್ ನಡುವಿನ ಸ್ಥಳದಿಂದ ಭಕ್ತರು ಗುರುವಾಯೂರಪ್ಪನ್ ನ್ನು ನೋಡಿ ಪ್ರಾರ್ಥಿಸಬಹುದು. ತುಲಾ ಅರ್ಪಣೆಗಳನ್ನು ಹೊರಗೆ ಮಾಡಲಾಗುತ್ತದೆ.
ದಿನಕ್ಕೆ 80 ವಿವಾಹಗಳನ್ನು ನಡೆಸಲು ಅನುಮತಿ ನೀಡಲಾಯಿತು. ವಿವಾಹದ ಔತಣಕ್ಕೆ 10 ಜನರು ಮಾತ್ರ ಭಾಗವಹಿಸಬಹುದು ಮತ್ತು ಇಬ್ಬರು ಛಾಯಾಗ್ರಾಹಕರು ಸೇರಿದಂತೆ 12 ಜನರಿಗೆ ಅವಕಾಶವಿದೆ. ದೇವಾಲಯದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಅರ್ಪಣೆಗಳನ್ನು ಮಾಡಲಾಗುವುದಿಲ್ಲ ಮತ್ತು ಬದಲಾಗಿ ಪ್ರಸಾದ ರೂಪದ ಅಕ್ಕಿಯನ್ನು ಪಾರ್ಸೆಲ್ ಆಗಿ ನೀಡಲಾಗುತ್ತದೆ.
ದೇವಾಲಯ ಪರಿಸರದಲ್ಲಿ ಟಿಪಿಆರ್ ಹೆಚ್ಚಿರುವುದರಿಂದ ಭಕ್ತರನ್ನು ನಿರ್ಬಂಧಿಸಲು ನಿರ್ಧರಿಸಲಾಗಿತ್ತು. ಸ್ಥಳೀಯ ಭಕ್ತರಿಗೆ ಭೇಟಿ ನೀಡಲು ಅನುಮತಿ ನಿರಾಕರಿಸಲಾಯಿತು. ಇದಕ್ಕಾಗಿಯೇ ಇದೀಗ ವಿನಾಯ್ತಿಗಳನ್ನು ತರಲು ನಿರ್ಧರಿಸಲಾಗಿದೆ.


