HEALTH TIPS

ರಾಜ್ಯದಲ್ಲಿ ಇಂದು 18,607 ಮಂದಿಗೆ ಕೋವಿಡ್ ಪಾಸಿಟಿವ್: 20,108 ಮಂದಿ ಗುಣಮುಖ: ಪರೀಕ್ಷಾ ಧನಾತ್ಮಕ ದರ ಶೇ.13.87

                                             

                 ತಿರುವನಂತಪುರ: ರಾಜ್ಯದಲ್ಲಿ ಇಂದು 18,607 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಮಲಪ್ಪುರಂ 3051, ತ್ರಿಶೂರ್ 2472, ಕೋಳಿಕ್ಕೋಡ್ 2467, ಎರ್ನಾಕುಳಂ 2216, ಪಾಲಕ್ಕಾಡ್ 1550, ಕೊಲ್ಲಂ 1075, ಕಣ್ಣೂರು 1012, ಕೊಟ್ಟಾಯಂ 942, ಅಲಪ್ಪುಳ 941, ತಿರುವನಂತಪುರ 933, ವಯನಾಡ್ 551, ಕಾಸರಗೋಡು 523, ಪತ್ತನಂತಿಟ್ಟ 441 ಮತ್ತು ಇಡುಕ್ಕಿ 433 ಜಿಲ್ಲೆಗಳಲ್ಲಿ ಕೋವಿಡ್ ಕಂಡುಬಂದಿದೆ. 

                    ಕಳೆದ 24 ಗಂಟೆಗಳಲ್ಲಿ 1,34,196 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ ಶೇ.13.87 ಆಗಿದೆ. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ,ಸಿಬಿ ನಾಟ್, ಟ್ರೂನಾಟ್, ಪಿ.ಒ.ಸಿ.ಟಿ.ಪಿ.ಸಿ.ಆರ್, ಆರ್.ಟಿ.ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,85,14,136 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.

                 ಕಳೆದ 24 ಗಂಟೆಗಲಲ್ಲಿ ಕೋವಿಡ್ ಬಾಧಿಸಿ  93 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ  17,747 ಕ್ಕೆ ಏರಿಕೆಯಾಗಿದೆ ಎಮದು ಸರ್ಕಾರ ತಿಳಿಸಿದೆ..

            ಇಂದು,ಸೋಂಕು ಪತ್ತೆಯಾದವರಲ್ಲಿ 116 ಮಂದಿ  ರಾಜ್ಯದ ಹೊರಗಿಂದ ಬಂದವರು. 17,610 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 797 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 2965, ತ್ರಿಶೂರ್ 2436, ಕೋಳಿಕ್ಕೋಡ್ 2448, ಎರ್ನಾಕುಲಂ 2198, ಪಾಲಕ್ಕಾಡ್ 1056, ಕೊಲ್ಲಂ 1071, ಕಣ್ಣೂರು 920, ಕೊಟ್ಟಾಯಂ 894, ಆಲಪ್ಪುಳ 924, ತಿರುವನಂತಪುರ 808, ವಯನಾಡ್ 534, ಕಾಸರಗೋಡು 511, ಪತ್ತನಂತಿಟ್ಟ 422 ಮತ್ತು ಇಡುಕ್ಕಿ 423 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

               ಇಂದು  84 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಪತ್ತೆಯಾಗಿದೆ. ಕಣ್ಣೂರು 25, ಪತ್ತನಂತಿಟ್ಟ 11, ವಯನಾಡು 9, ಕಾಸರಗೋಡು 8, ತ್ರಿಶೂರ್ 7, ಎರ್ನಾಕುಳಂ, ಪಾಲಕ್ಕಾಡ್ 6, ಮಲಪ್ಪುರಂ 4, ಕೊಲ್ಲಂ, ಕೋಯಿಕ್ಕೋಡ್ ತಲಾ 3 ಮತ್ತು ಕೊಟ್ಟಾಯಂ 2 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. 

                ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 20,108 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1048, ಕೊಲ್ಲಂ 1695, ಪತ್ತನಂತಿಟ್ಟ 523, ಆಲಪ್ಪುಳ 1150, ಕೊಟ್ಟಾಯಂ 790, ಇಡುಕ್ಕಿ 400, ಎರ್ನಾಕುಳಂ 2339, ತ್ರಿಶೂರ್ 2815, ಪಾಲಕ್ಕಾಡ್ 2137, ಮಲಪ್ಪುರಂ 2119, ಕೋಯಿಕ್ಕೋಡ್ 2397, ವಯನಾಡ್ 726, ಕಣ್ಣೂರು 1115 ಮತ್ತು ಕಾಸರಗೋಡು 854 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,76,572 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 33,57,687 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

             ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,90,858 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,61,530 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 29,328 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2328 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

                  ಸ್ಥಳೀಯಾಡಳಿತ  ಸರ್ಕಾರಗಳಲ್ಲಿ ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ (WIPR) ಆಧಾರದ ಮೇಲೆ ವರ್ಗೀಕರಿಸಲಾಗಿದೆ. 52 ಸ್ಥಳಿಯಾಡಳಿತ ಸಂಸ್ಥೆಗಳ 266 ವಾರ್ಡ್‍ಗಳು WIPR  ವಲಯದಲ್ಲಿದೆ.  10 ಕ್ಕಿಂತ ಹೆಚ್ಚು ಟಿ.ಪಿ.ಆರ್ ಇದ್ದು  ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries