HEALTH TIPS

ಪ್ರಕರಣವನ್ನು ಕೈಬಿಡಲು ಲಂಚದ ಬೇಡಿಕೆ; ಡಿವೈಎಸ್‍ಪಿ ಅಮಾನತು

                   ತಿರುವನಂತಪುರಂ: ಲಂಚದ ಬೇಡಿಕೆ ಇರಿಸಿದ ಆರೋಪಕ್ಕಾಗಿ ಡಿವೈಎಸ್‍ಪಿಯನ್ನು ಅಮಾನತುಗೊಳಿಸಲಾಗಿದೆ. ಲಂಚ ಕೇಳಿದ ದೂರಿನ ಮೇಲೆ ಮಾಜಿ ಅಟ್ಟಿಂಗಲ್ ಡಿವೈಎಸ್‍ಪಿ ಎಸ್‍ವೈ ಸುರೇಶ್ ಅವರನ್ನು ಅಮಾನತು ಮಾಡಲಾಗಿದೆ. ಅಮಾನತು ತನಿಖೆ ಹಂತದಲ್ಲಿದೆ.

                   ಘಟನೆಯಲ್ಲಿ ಸುರೇಶ್ ವಿರುದ್ಧ ವಿಜಿಲೆನ್ಸ್ ವಿಚಾರಣೆ ನಡೆಸಿ ವರದಿ ಸಲ್ಲಿಸಿದೆ. ಈ ವರದಿಯ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಅಟ್ಟಿಂಗಲ್ ಡಿವೈಎಸ್ ಪಿಯಾಗಿದ್ದಾಗ, ಅವರು ರೆಸಾರ್ಟ್‍ಗಳನ್ನು ಪರಿಶೀಲಿಸಿ  ಪ್ರಕರಣವೊಂದನ್ನು ಕೈಗೆತ್ತಿಕೊಂಡ ಬಳಿಕ  ಲಂಚವನ್ನು ಪಡೆದ ಆರೋಪವನ್ನು ಹೊರಿಸಿದ್ದರು.

               ಸುರೇಶನನ್ನು ವಿಜಿಲೆನ್ಸ್ ಭ್ರಷ್ಟಾಚಾರ ನಿಗ್ರಹ ದಳದ ವಿಶೇಷ ತನಿಖಾ ಘಟಕವು ತನಿಖೆ ಮಾಡಿತು. ಇದರಲ್ಲಿ ದೂರು ನಿಜವೆಂದು ಸಾಬೀತಾಯಿತು.

              ಸುರೇಶನನ್ನು ಈ ಮೊದಲು ಮತ್ತೊಂದು ಪ್ರಕರಣದಲ್ಲಿ ಅಮಾನತು ಮಾಡಲಾಗಿತ್ತು. ಪೇಟ ಸಿಐ ಆಗಿದ್ದಾಗ ಕೊಲೆ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ವಿಳಂಬ ಮಾಡಿದ್ದಕ್ಕಾಗಿ ಅಮಾನತುಗೈಯ್ಯಲಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries