ತಿರುವನಂತಪುರಂ: ಕೋವಿಡ್ ನಂತರದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸಾ ದರಗಳನ್ನು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ರಿಜಿಸ್ಟ್ರೇಷನ್,ನರ್ಸಿಂಗ್ ಚಾರ್ಜ್, ಔಷಧಿ ಮುಂತಾದವುಗಳೆಲ್ಲ ಸೇರಿ ಎನ್ ಬಿಎಎಚ್ ಮಾನ್ಯತೆ ಹೊಂದಿರುವ ಖಾಸಗಿ ಆಸ್ಪತ್ರೆಗಳಿಗೆ, ಮಾನ್ಯತೆ ಪಡೆಯದ ಆಸ್ಪತ್ರೆಗಳಿಗೆ ಸಾಮಾನ್ಯ ವಾರ್ಡ್ಗಳಲ್ಲಿ ದಿನಕ್ಕೆ ಗರಿಷ್ಠ ರೂ .2,910 ಮತ್ತು ಮಾನ್ಯತೆ ಪಡೆಯದ ಆಸ್ಪತ್ರೆಗಳ ಸಾಮಾನ್ಯ ವಾರ್ಡ್ಗಳಿಗೆ ರೂ.2645 ಶುಲ್ಕ ವಿಧಿಸಬಹುದಾಗಿದೆ. ರಾಜ್ಯ ಆರೋಗ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ವಾರ್ಡ್ಗಳು 750 ರೂ., ನಿಗಾ ಘಟಕಕ್ಕೆ ರೂ 1,250, ಐಸಿಯು ರೂ 1,500 ಮತ್ತು ವೆಂಟಿಲೇಟೆಡ್ ಐಸಿಯು ರೂ 2,000 ರೂ.ಎಂಬಂತೆ ಶುಲ್ಕ ವಿಧಿಸಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ವೈದ್ಯಕೀಯ ಕಾಲೇಜುಗಳವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ನಂತರದ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ.