HEALTH TIPS

ವಾರಿಯಂಕುನ್ನತ್ ಅವರನ್ನು ಮತಾಂಧ ಎಂದು ಬಿಂಬಿಸುವುದು ತಪ್ಪು; ತನ್ನ ಹೇಳಿಕೆಗೆ ಯಾಕೆ ಕ್ಷಮೆ ಕೋರಬೇಕು: ಐತಿಹಾಸಿಕ ಘಟನೆಗಳ ಹೇಳಿಕೆಗಳ ಬಗ್ಗೆ ಸ್ಪೀಕರ್ ಎಂ.ಬಿ.ರಾಜೇಶ್

                                            

                 ತಿರುವನಂತಪುರಂ: ಐತಿಹಾಸಿಕ ಸಂಗತಿಗಳನ್ನು ಹೇಳಿದ್ದಕ್ಕಾಗಿ ತಾನೇಕೆ ಕ್ಷಮೆ ಯಾಕೆ ಕೇಳಬೇಕು ಎಂದು ಸ್ಪೀಕರ್ ಎಂ.ಬಿ.ರಾಜೇಶ್ ಕೇಳಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹಾಗೂ ಮಾಪಿಳ್ಳೆ ದಂಗೆಯ ರೂವಾರಿ ವಾರಿಯಂಕುನ್ನತ್ ಕುಂಞÂ ಅಹಮ್ಮದ್ ಹಾಜಿ ಅವರೀರ್ವರನ್ನೂ ಹೋಲಿಸಿ ಸ್ಪೀಕರ್ ನೀಡಿದ ಹೇಳಿಕೆಯಿಂದ ಕುಪಿತರಾಗಿ ಯುವ ಮೋರ್ಚಾ ದೆಹಲಿ ಪೋಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಸ್ಪೀಕರ್ ಪ್ರತಿಕ್ರಿಯೆ ನೀಡಿದ್ದಾರೆ. 

                  ವಾರಿಯಂಕುನ್ನತ್ ನ ಸಾವು ಮತ್ತು ಭಗತ್ ಸಿಂಗ್ ಸಾವಿನ ನಡುವೆ ಸಾಮ್ಯತೆಗಳಿವೆ. ಆ ಸಾಮ್ಯತೆಯನ್ನು ಹೋಲಿಸಲಾಯಿತು. ವಾರಿಯಂಕುನ್ನತ್ ಅವರು ತನ್ನನ್ನು ಮುಂಭಾಗದಿಂದ ನೇರಾನೇರ  ಗುಂಡು ಹಾರಿಸಿ ಕೊಲ್ಲಬೇಕು ಎಂದು ಹೇಳಿದ್ದರು. ಅಂತಹದೇ ಹೇಳಿಕೆಯನ್ನು ಭಗತ್ ಸಿಂಗ್ ಕೂಡಾ ನೀಡಿದ್ದರು. ವಾರಿಯಂ ಕುನ್ನತ್ ಅವರನ್ನು ಧಾರ್ಮಿಕ ಮತಾಂಧ ಎಂದು ಬಿಂಬಿಸುವುದು ತಪ್ಪು ಎಂದು ಎಂ.ಬಿ.ರಾಜೇಶ್ ಹೇಳಿದ್ದಾರೆ ಎಂದು ಮಾದಸ್ಯಮಗಳು ವರದಿ ಮಾಡಿದೆ.

                     ಮಲಬಾರ್ ಗಲಭೆಯ 100 ನೇ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದಂತೆ ಗ್ರಂಥಾಲಯ ಮಂಡಳಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಬಿ ರಾಜೇಶ್ ಭಾನುವಾರ ಈ ಹೇಳಿಕೆ ನೀಡಿದ್ದರು.  ವಾರಿಯಂ ಕುನ್ನತ್ ಜಾತ್ಯತೀತತೆಯನ್ನು ಎತ್ತಿಹಿಡಿಯುವ ನಾಯಕ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮನಾದ ಕೇಳಿದ ಭಗತ್ ಸಿಂಗ್ ರಂತೆ ಎಂದು ಎಂ.ಬಿ ರಾಜೇಶ್ ಹೇಳಿದ್ದು, ಬಳಿಕ ಅದು ವಿವಾದಕ್ಕೆಡೆಯಾಯಿತು. 

                ಏತನ್ಮಧ್ಯೆ, ಬಿಜೆಪಿ ನಾಯಕ ಬಿ ಗೋಪಾಲಕೃಷ್ಣನ್ ಅವರು ಎಂ ಬಿ ರಾಜೇಶ್ ಅವರು ಸಭಾಪತಿಯ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು. ಸ್ಪೀಕರ್ ಎಂದಿಗೂ ರಾಜಕೀಯ ಇಸಂನ ಪ್ರಚಾರಕನಾಗಬಾರದು ಮಾತನಾಡುವವರು ಸಮಾಜದಲ್ಲಿ ಘನತೆ ಮತ್ತು ಗೌರವವನ್ನು ಸೃಷ್ಟಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಅದನ್ನೇ ಕೇರಳದ ಸ್ಪೀಕರ್ ನಿಂದ ನಿರೀಕ್ಷಿಸಲಾಗಿದೆ. ಎಮ್ ಬಿ ರಾಜೇಶ್ ಅವರು ಲೈಬ್ರರಿ ಕೌನ್ಸಿಲ್ ಕಾರ್ಯಕ್ರಮದಲ್ಲಿ ತಾಲಿಬಾನ್ ಭಾಷಣಕಾರರಂತೆ ಮಾತನಾಡಿದ್ದಕ್ಕಾಗಿ ಗೋಪಾಲಕೃಷ್ಣನ್ ಟೀಕಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries