ತಿರುವನಂತಪುರಂ: ನಿನ್ನೆ ರಾತ್ರಿ ಹಠಾತ್ತನೆ ಮೂಲಮಟ್ಟಂ ವಿದ್ಯುತ್ ಉತ್ಪಾಧನಾ ಜನರೇಟರ್ ಕಾರ್ಯಸ್ಥಗಿತಗೊಳಿಸಿದ ಕಾರಣ ಒಂದಷ್ಟು ಹೊತ್ತು ರಾಜ್ಯಾದ್ಯಂತ ವಿದ್ಯುತ್ ವ್ಯೆತ್ಯಯ ಉಂಟಾಯಿತು. ಈ ಕಾರಣದಿಂದ ಹೊರ ರಾಜ್ಯಗಳಿಂದ 400 ಮೆಗಾವ್ಯಾಟ್ ವಿದ್ಯುತ್ ಸಂಪರ್ಕವನ್ನು ಪಡೆದು ವ್ಯೆತ್ಯಯಕ್ಕೆ ಪರಿಹಾರ ಕಲ್ಪಿಸಲಾಯಿತು. ರಾತ್ರಿ 9 ರ ಸುಮಾರಿಗೆ ವಿದ್ಯುತ್ ಕಡಿತಕ್ಕೆ ಪರಿಹಾರ ಒದಗಿಸಲಾಯಿತು.
ಮೂಲಮಟ್ಟಂ ವಿದ್ಯುತ್ ಕೇಂದ್ರದಲ್ಲಿನ 6 ಜನರೇಟರ್ ಗಳು ಕಾರ್ಯ ಸ್ಥಗಿತಗೊಳಿಸಿದ ಕಾರಣ ಸಂಜೆ 7.30 ಕ್ಕೆ ವಿದ್ಯುತ್ ಕಡಿತ ಆರಂಭವಾಯಿತು. ನಿಯಂತ್ರಣ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಜನರೇಟರ್ಗಳ ಕಾರ್ಯಾಚರಣೆ ಥಟ್ಟನೆ ನಿಲ್ಲಿಸಲಾಯಿತು. ತರುವಾಯ, ನೆರೆಯ ರಾಜ್ಯಗಳಿಂದ ವಿದ್ಯುತ್ ಪೂರೈಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು.


