HEALTH TIPS

ಸ್ಥಳೀಯ ಪತ್ರಕರ್ತರನ್ನು ಸಾಂಸ್ಕøತಿಕ ಕಲ್ಯಾಣ ನಿಧಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು: ಸಚಿವ ಕೆ.ರಾಧಾಕೃಷ್ಣನ್

 

             ಚೇಲಕ್ಕರ:  ಸ್ಥಳೀಯ ಪತ್ರಕರ್ತರನ್ನು ಕೇರಳ ರಾಜ್ಯ ಸಾಂಸ್ಕøತಿಕ ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ರಾಧಾಕೃಷ್ಣನ್ ಭರವಸೆ ನೀಡಿದರು. ಕೇರಳ ಪತ್ರಕರ್ತರ ಒಕ್ಕೂಟದ ಚೇಳಕ್ಕರ ಪ್ರಾದೇಶಿಕ ಸಮಿತಿಯ ಅಭಿನಂದನಾ ಸಮಾರಂಭ-2021 ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

               ಸ್ಥಳೀಯ ಪತ್ರಕರ್ತರ ಚಟುವಟಿಕೆಗಳು ಗಮನಾರ್ಹವಾಗಿವೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಮುದಾಯಕ್ಕೆ ಧನಾತ್ಮಕ ಕೊಡುಗೆ ನೀಡಲು ಮಾಧ್ಯಮಗಳ ಪ್ರಯತ್ನಗಳು ಶ್ಲಾಘನೀಯ ಎಂದರು. 

                 ಕೆಜೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಸಿ ಸ್ಮಿಜನ್ ಉದ್ಘಾಟಿಸಿದರು. ಚೇಲಕ್ಕರ ಪ್ರದೇಶ ಅಧ್ಯಕ್ಷ ಸ್ಟಾನ್ಲಿ ಕೆ ಸ್ಯಾಮ್ಯುಯೆಲ್ ಅಧ್ಯಕ್ಷತೆ ವಹಿಸಿದ್ದರು.

             ಸಮಾರಂಭದಲ್ಲಿ ಛಾಯಾಗ್ರಾಹಕ ಪ್ರಶಸ್ತಿ ವಿಜೇತ ಮಣಿ ಚೇರುರುತಿ ಅವರನ್ನು ಸನ್ಮಾನಿಸಲಾಯಿತು. ಮತ್ತು ಪತ್ರಕರ್ತರಿಗೆ ಓಣಂ ಕಿಟ್‍ಗಳ ವಿತರಣೆ ನಡೆಯಿತು. 

                 ಜೊತೆಗೆ ಈ ಸಂದರ್ಭ ಪತ್ರಿಕಾ ವಿತರಣೆಯ ವೇಳೆ  ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ವಿತರಿಸಲಾಯಿತು. ಕೆಜೆಯು ಜಿಲ್ಲಾಧ್ಯಕ್ಷ ಅಜೀಶ್ ಕರ್ಕಿತಕತ್ ಮುಖ್ಯ ಭಾಷಣ ಮಾಡಿದರು. ಎಂ.ಆರ್. ಸಜಿ, ಒಎಸ್ ಸಿಬಿ ಮತ್ತು ಮಜೀದ್ ಮಾಸ್ತರ್ ಮಾತನಾಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries