ತ್ರಿಶೂರ್: ಗುರುವಾಯೂರು ದೇವಸ್ಥಾನಕ್ಕೆ ಹೊಸ ಮೇಲ್ಶಾಂತಿ ಆಯ್ಕೆಯಾಗಿದ್ದಾರೆ. ಶೋರ್ನೂರು ಕವಲಪ್ಪಾರದ ಜಯಪ್ರಕಾಶ್ ಅವರು ಹೊಸ ಮೇಲ್ಶಾಂತಿಯಾಗಿದ್ದಾರೆ. ಜಯಪ್ರಕಾಶ್ ನಂಬೂದಿರಿ ಗುರುವಾಯೂರು ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗುತ್ತಿರುವುದು ಇದೇ ಮೊದಲು.
ತಿಯನ್ನೂರು ಶಂಕರನಾರಾಯಣರ ಆರು ತಿಂಗಳ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಹಳೆಯ ತೀರ್ಮಾನದಂತೆ ಈ ನೇಮಕ ನಡೆಸಲಾಗಿದೆ. ಒಟ್ಟು 39 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅವರಲ್ಲಿ 36 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಜಯಪ್ರಕಾಶ್ ಅವರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.