HEALTH TIPS

ಹೆಚ್ಚು ಉಚಿತ ಚಿಕಿತ್ಸೆ ನೀಡಿದ ರಾಜ್ಯ ಕೇರಳ: ಕೇಂದ್ರ ಸರ್ಕಾರದಿಂದ ಮೂರು ಪ್ರಶಸ್ತಿಗಳು ರಾಜ್ಯಕ್ಕೆ

               ತಿರುವನಂತಪುರಂ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ ರಾಜ್ಯಕ್ಕೆ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಕೇರಳವು ಕೇಂದ್ರ ಸರ್ಕಾರದ ಆರೋಗ್ಯ ಮಂಥನ್ 3.0 ನ್ನು ಪಡೆದಿದೆ. ಅತ್ಯಂತ ಹೆಚ್ಚು ಉಚಿತ ಚಿಕಿತ್ಸೆಯನ್ನು ನೀಡಿದ ರಾಜ್ಯಕ್ಕಿರುವ ಪ್ರಶಸ್ತಿಯಾಗಿದೆ. ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜು ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆಯಡಿ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಸಂಖ್ಯೆಯ ಉಚಿತ ಚಿಕಿತ್ಸೆಗಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

                   ಇದು ಕಾರುಣ್ಯ ಆರೋಗ್ಯ ರಕ್ಷಣಾ ಯೋಜನೆ (ಸಿಎಎಸ್‍ಪಿ) ಮೂಲಕ ರಾಜ್ಯವು ಮಾಡಿದ ಅತ್ಯುತ್ತಮ ಕರ್ತವ್ಯಕ್ಕೆ  ಮಾನ್ಯತೆ ಎಂದು ಅವರು ಹೇಳಿದರು. ಕಳೆದ ಒಂದು ವರ್ಷದಲ್ಲಿ ಅತ್ಯಧಿಕ ಸಂಖ್ಯೆಯ ಪಿ.ಎಂ.ಜೆ.ವೈ ಕ್ಯಾಸ್ಪ್ ಕಾರ್ಡ್‍ಗಳಿಗೆ ಪ್ರಧಾನಮಂತ್ರಿ ಆರೋಗ್ಯ ಸ್ನೇಹಿ ಪ್ರಶಸ್ತಿಯನ್ನು ಆಲಪ್ಪುಳದ ವೆಂಙನಂ ಟಿ.ಸಿ.ಮೆಡಿಕಲ್ ಕಾಲೇಜಿನ ಎ.ಅಶ್ವತಿ ಪಡೆದುಕೊಂಡಿದ್ದಾರೆ.

                   ಕಳೆದ 3 ವರ್ಷಗಳಲ್ಲಿ, ಈ ಯೋಜನೆಯಡಿ ದೇಶದಲ್ಲಿ ಒಟ್ಟು 2 ಕೋಟಿ ಉಚಿತ ಚಿಕಿತ್ಸೆಗಳನ್ನು ಅಳವಡಿಸಲಾಗಿದೆ. ಇದರಲ್ಲಿ 27.5 ಲಕ್ಷವನ್ನು (ಒಟ್ಟು ಚಿಕಿತ್ಸೆಯ ಶೇ. 13.66) ಕೇರಳದಿಂದಲೇ ಉಚಿತವಾಗಿ ನೀಡಲಾಗಿದೆ. ಈ ಗಮನಾರ್ಹ ಸಾಧನೆಗಾಗಿ ರಾಜ್ಯವು ಪ್ರಶಸ್ತಿಯನ್ನು ಗೆದ್ದಿದೆ ಎಂದು ವೀಣಾ ಜಾರ್ಜ್ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries