HEALTH TIPS

ಕಾಂಗ್ರೆಸ್ಸ್ ತೊರೆದ ಕೆಪಿ ಅನಿಲ್ ಕುಮಾರ್: ಅವರನ್ನು ವಜಾ ಮಾಡಲಾಗಿದೆ ಎಂದ ಸುಧಾಕರನ್

                                          

                    ತಿರುವನಂತಪುರಂ: ಕಾಂಗ್ರೆಸ್ ನಾಯಕ ಕೆಪಿ ಅನಿಲ್ ಕುಮಾರ್ ಪಕ್ಷವನ್ನು ತೊರೆದಿದ್ದಾರೆ. ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್ ಅವರಿಗೆ ನೀಡಲಾಗಿದೆ ಎಂದು ಅನಿಲ್ ಕುಮಾರ್ ಹೇಳಿದ್ದಾರೆ. ಅವರುÀ ಪ್ರಕಟಣೆಯನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. 

                    ಅನಿಲ್ ಕುಮಾರ್ ಪಕ್ಷ ತೊರೆದು ಸಿಪಿಎಂಗೆ ಸೇರ್ಪಡೆಗೊಳ್ಳುತ್ತಾರೆ ಎನ್ನಲಾಗಿದೆ. ಅನಿಲ್ ಕುಮಾರ್ ಎಕೆಜಿ ಕೇಂದ್ರಕ್ಕೆ ಆಗಮಿಸಿ ಕೊಡಿಯೇರಿ ಬಾಲಕೃಷ್ಣನ್ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

                         ಕೆಪಿಸಿಸಿಯ ಮಾಜಿ  ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್ ಕುಮಾರ್ ಕಾಂಗ್ರೆಸ್ ನಾಯಕತ್ವವನ್ನು ಇತ್ತೀಚೆಗೆ ಪ್ರಶ್ನಿಸಿದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಬೆನ್ನಿಗೆ ಚೂರಿ ಹಾಕಿ ಸಾಯಲು ತಯಾರಿಲ್ಲ. ಆದ್ದರಿಂದ, ಕಾಂಗ್ರೆಸ್ ಜೊತೆಗಿನ 43 ವರ್ಷಗಳ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ಅವರು ಹೇಳಿದರು. 

            ಅನಿಲ್ ಕುಮಾರ್ ಯಾವುದೇ ಗುಂಪುಗಳಲ್ಲಿ ಗುರುತಿಸಿಕೊಳ್ಳದೆ  ಕಾಂಗ್ರೆಸ್ ನ್ನು ಮುನ್ನಡೆಸಿದವರು. ಅವರು ಐದು ವರ್ಷಗಳ ಕಾಲ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಮತ್ತು ಪಕ್ಷದಿಂದ ಇದುವರೆಗೆ ಯಾವುದೇ ಉನ್ನತ ಸ್ಥಾನ ಪಡೆದವರಲ್ಲ. 

                   ಕಾಂಗ್ರೆಸ್ ಪಕ್ಷ ತನ್ನ ಪ್ರಜಾಪ್ರಭುತ್ವವನ್ನು ಕಳೆದುಕೊಂಡಿದೆ. ಹೊಸ ನಾಯಕತ್ವವು ಪಕ್ಷಪಾತದ ರೀತಿಯಲ್ಲಿ ವರ್ತಿಸುತ್ತಿದೆ ಎಂದ ಅವರು ಮಾಧ್ಯಮ ಚರ್ಚೆಗೆ ಪ್ರತಿಕ್ರಿಯಿಸಿ ಶೋಕಾಸ್ ನೋಟಿಸ್ ಪಡೆದ ತಕ್ಷಣ ಪ್ರತಿಕ್ರಿಯಿಸಿದ್ದೆ.  ಆದರೆ 11 ದಿನಗಳಾದರೂ  ನಾಯಕತ್ವದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅನಿಲ್ ಕುಮಾರ್ ಹೇಳಿದರು.

                          ಅನಿಲ್ ಕುಮಾರ್ ಕೆ ಸುಧಾಕರನ್ ಅವರನ್ನು ಕಠಿಣ ಶಬ್ದಗಳಿಂದ ಟೀಕಿಸಿದರು. ಸುಧಾಕರನ್ ಕೆಪಿಸಿಸಿ ಅಧ್ಯಕ್ಷರಾಗುವುದು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಶಕ್ಕೆ ಬಂದಂತೆ ಎಂಬುದು ಅನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದರು.

                   ಏತನ್ಮಧ್ಯೆ, ಅನಿಲ್ ಕುಮಾರ್ ಅವರನ್ನು ಹೊರಹಾಕಲಾಗಿದೆ ಎಂದು ಸುಧಾಕರನ್ ಹೇಳಿದರು. ಅನಿಲ್ ಕುಮಾರ್ ಕಡೆಯಿಂದ ಗಂಭೀರ ಶಿಸ್ತಿನ ಉಲ್ಲಂಘನೆಯಾಗಿದೆ ಎಂದು ಪಕ್ಷ ಹೇಳಿಕೆ ನೀಡಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries