HEALTH TIPS

ಸೆಮಿ ಹೈಸ್ಪೀಡ್ ರೈಲು ಮಾರ್ಗ; ಕೇರಳದ ಆರ್ಥಿಕ ಹೊಣೆಗಾರಿಕೆಗಳನ್ನು ಸ್ಪಷ್ಟಪಡಿಸಲು ಕೇಂದ್ರ ರೈಲ್ವೆ ಸಚಿವರಿಗೆ ಸಿಎಂ ಮನವಿ

                                                            

                      ನವದೆಹಲಿ:  ತಿರುವನಂತಪುರಂನಿಂದ ಕಾಸರಗೋಡಿಗೆ  ನಾಲ್ಕು ಗಂಟೆಗಳಲ್ಲಿ ತಲಪುವ ಬಹುನಿರೀಕ್ಷಿತ ಸೆಮಿ-ಹೈ ಸ್ಪೀಡ್ ರೈಲು ಮಾರ್ಗ (ಸಿಲ್ವರ್ ಲೈನ್) ಯೋಜನೆಯ ಹಿನ್ನೆಲೆಯಲ್ಗಿ  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಅವರನ್ನು ಭೇಟಿ ಮಾಡಿದರು. ರೈಲ್ವೇಯು ಸಾಲವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲದ ಕಾರಣ ಕೇಂದ್ರ ಸಚಿವರು ಇದನ್ನು ಸ್ಪಷ್ಟಪಡಿಸುವಂತೆ ರಾಜ್ಯವನ್ನು ಕೇಳಿದರು.

                          ಸಿಲ್ವರ್ ಲೈನ್ ಯೋಜನೆಗೆ ರೂ 63941 ಕೋಟಿ ರೂ. ಮೊತ್ತ ಅಂದಾಜಿಸಲಾ|ಗಿದೆ. ಇದರಲ್ಲಿ ಕೇಂದ್ರ ಪಾಲು `2150 ಕೋಟಿ.,  ರೂ. 975 ಕೋಟಿ ಮೌಲ್ಯದ 185 ಹೆಕ್ಟೇರ್ ಭೂಮಿ ಕೂಡ ರೈಲ್ವೇಗೆ ಸೇರಿದೆ. ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಕಂಡುಕೊಳ್ಳಬೇಕು. ಅಂತಾರಾಷ್ಟ್ರೀಯ ಏಜೆನ್ಸಿಗಳ ಮೂಲಕ ಪಡೆದ ಸಾಲವನ್ನು ರಾಜ್ಯವು ತೆಗೆದುಕೊಳ್ಳಬಹುದೇ ಎಂದು ಪರಿಶೀಲಿಸುವುದಾಗಿ ಸಿಎಂ ಹೇಳಿದರು.

                ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವಾಲಯದ ಮೂಲಕ ಬಿ.ಐ.ಸಿ.ಎ, ಐಡಿಬಿ, ಎಐಐಬಿ, ಕೆ.ಎಫ್, ಡಬ್ಲ್ಯು ಐ ನಿಂದ `33700 ಕೋಟಿ ಸಾಲವನ್ನು ಪಡೆಯಲು ಪ್ರಸ್ತಾವನೆ ಇದೆ. ರೈಲ್ವೆ ಸಚಿವಾಲಯವು ಯೋಜನೆಯನ್ನು ಹೆಚ್ಚು ಪ್ರಾಯೋಗಿಕವಾಗಿ ಮಾಡುವ ಮಾರ್ಗಗಳನ್ನು ಪರಿಗಣಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.

                  ಭೂಸ್ವಾಧೀನಕ್ಕೆ 13362 ಕೋಟಿ ಅಗತ್ಯವಿದೆ. ಇದನ್ನು ಹಡ್ಕೋ, ಕಿಫ್ಬಿ ಮತ್ತು ರಾಜ್ಯ ಸರ್ಕಾರ ಭರಿಸುತ್ತದೆ. ಉಳಿದ ಮೊತ್ತವನ್ನು ರೈಲ್ವೆ, ರಾಜ್ಯ ಸರ್ಕಾರ ಮತ್ತು ಸಾರ್ವಜನಿಕರಿಗೆ ಇಕ್ವಿಟಿ ಮೂಲಕ ಕಂಡುಹಿಡಿಯಲಾಗುತ್ತದೆ. ಯೋಜನೆಯ ಅಂತಿಮ ಅನುಮೋದನೆಯನ್ನು ತ್ವರಿತಗೊಳಿಸಬೇಕು ಎಂದು ಸಿಎಂ ಆಗ್ರಹಿಸಿದರು. ಈ ಯೋಜನೆಗೆ ರೈಲ್ವೆ ಸಚಿವಾಲಯವು ಈ ಮೊದಲು ತಾತ್ವಿಕವಾಗಿ ಪ್ರಾಥಮಿಕ ಅನುಮೋದನೆಯನ್ನು ನೀಡಿತ್ತು. ಅಂತಿಮ ಅನುಮೋದನೆಗಾಗಿ ಕೇರಳ ಸರ್ಕಾರವು ವಿವರವಾದ ಯೋಜನಾ ವರದಿಯನ್ನು ರೈಲ್ವೇ ಮಂಡಳಿಗೆ ಸಲ್ಲಿಸಿದೆ.

                 ರಾಜ್ಯಸಭಾ ಸಂಸದ ಜಾನ್ ಬ್ರಿಟಾಸ್, ಮುಖ್ಯ ಕಾರ್ಯದರ್ಶಿ ಡಾ. ವಿಪಿ ಜಾಯ್, ಕೇರಳ ಹೌಸ್ ರೆಸಿಡೆಂಟ್ ಕಮಿಷನರ್ ಸೌರಭ್ ಜೈನ್, ಕೆ. ರೈಲು ವ್ಯವಸ್ಥಾಪಕ ನಿರ್ದೇಶಕ ಕೆ. ಅಜಿತ್ ಕುಮಾರ್, ವಿಶೇಷ ಅಧಿಕಾರಿ ವಿಜಯಕುಮಾರ್ ಮತ್ತು ಕೇಂದ್ರ ಸಚಿವಾಲಯದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries