HEALTH TIPS

'ವಿಶ್ವಾಸಾರ್ಹತೆ ಕೊರತೆ' ನ್ಯಾಯಾಂಗದ ಮುಂದಿರುವ ಸವಾಲು: ನ್ಯಾ. ಅಭಯ್‌ ಎಸ್‌.ಓಕಾ

                ಠಾಣೆ : 'ಪ್ರಸ್ತುತ ಸನ್ನಿವೇಶದಲ್ಲಿ ವಿಶ್ವಾಸಾರ್ಹತೆ ಕೊರತೆ ಎಂಬ ಸವಾಲನ್ನು ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿದೆ' ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹೇಳಿದರು.

             ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡ ಕಾರಣ, ಠಾಣೆ ಜಿಲ್ಲಾ ನ್ಯಾಯಾಲಯಗಳ ವಕೀಲರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

     


                  ದೇಶದಲ್ಲಿ ಕೋವಿಡ್‌ನ 3ನೇ ಅಲೆ ಕಾಣಿಸಿಕೊಂಡರೂ ಸಹ, ನ್ಯಾಯಾಂಗದ ಕಾರ್ಯ ಅಬಾಧಿತವಾಗಿರುವುದು ಹಾಗೂ ಜನರಿಗೆ ತ್ವರಿತ ನ್ಯಾಯ ಸಿಗಲಿದೆ ಎಂಬುದನ್ನು ಅಧಿಕಾರಿಗಳು ಹಾಗೂ ವಕೀಲರು ಖಾತ್ರಿಪಡಿಸಬೇಕು' ಎಂದರು.

          'ಕೋವಿಡ್‌ ಪಿಡುಗಿನ ಕಾರಣ ಸಾಕಷ್ಟು ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದಿವೆ. ಇವುಗಳ ಶೀಘ್ರ ವಿಲೇವಾರಿಯಾಗುವುದು ಸಹ ಮುಖ್ಯ' ಎಂದು ಹೇಳಿದರು.

            ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ಕಾರ್ಯನಿರ್ವಹಿಸಿದ ಪರಿಯನ್ನು ಅವರು ಪ್ರಸ್ತಾಪಿಸಿದರು.

          'ಬಾಕಿ ಇರುವ ಅರ್ಜಿಗಳ ತ್ವರಿತ ವಿಲೇವಾರಿಗಾಗಿ 11 ಶನಿವಾರಗಳಂದು ಸಹ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸಿದರು. ಇಂಥ ಕಾರ್ಯ ಎಲ್ಲ ನ್ಯಾಯಾಲಯಗಳಲ್ಲಿಯೂ ನಡೆಯಬೇಕು' ಎಂದು ಪ್ರತಿಪಾದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries