HEALTH TIPS

ಮುಳಿಯಾರಿನಲ್ಲಿ ಅಗ್ರಿ ನ್ಯೂಟ್ರಿ ಗಾರ್ಡನ್ ಯೋಜನೆ ಆರಂಭ

                 ಮುಳ್ಳೇರಿಯ: ಕುಟುಂಬದ ಸಂಪೂರ್ಣ ಪೌಷ್ಟಿಕಾಂಶದ ಅಗತ್ಯತೆಗಾಗಿ ಪ್ರತಿ ಮನೆಗಳಲ್ಲಿ ಕೃಷಿ ಪೆÇೀಷಕಾಂಶಗಳ ತೋಟಗಳನ್ನು ಸ್ಥಾಪಿಸಲು ಮುಳಿಯಾರು ಪಂಚಾಯತಿಯಲ್ಲಿ ಅಗ್ರಿ ನ್ಯೂಟ್ರಿಷನ್ ಗಾರ್ಡನ್ ಯೋಜನೆಗೆ ಚಾಲನೆ ನೀಡಲಾಗಿದೆ. 

              ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಹಸಿರು ಕ್ರಿಯಾಸೇನೆಯ ಸದಸ್ಯರು ಸಿದ್ಧಪಡಿಸುತ್ತಿರುವ ಯೋಜನೆಯ ಅಂಗವಾಗಿ ಉದುಮ ಶಾಸಕ ಸಿ.ಎಚ್.ಕುಂಞಂಬು ಅವರು ಮಾದರಿ ತೋಟವನ್ನು ಉದ್ಘಾಟಿಸಿದರು. ಸ್ಥಳೀಯರಾದ ಕಮಲಾಕ್ಷ ಎಂಬುವರ ಎರಡು ಎಕರೆಯ ಪಾಳು ಭೂಮಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಹಸಿರು ಕ್ರಿಯಾಸೇನೆಯ ಸದಸ್ಯರು ಯೋಜನೆಗೆ ಭೂಮಿ ಸಿದ್ಧಪಡಿಸಿದ್ದರು. ಈ ಯೋಜನೆಯನ್ನು ಹಸಿರು ಕ್ರಿಯಾಸೇನೆಯ 25 ಮಂದಿ ಸದಸ್ಯರು ಐದು ಜೆಎಲ್‍ಜಿಗಳಾಗಿ ವಿಂಗಡಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. ಕುಟುಂಬಶ್ರೀ ಜಿಲ್ಲಾ ಮಿಷನ್ ಯೋಜನೆಗೆ ಎಲೆಕೋಸು, ಬೀಟ್ರೂಟ್, ಬೀನ್ಸ್ ಮತ್ತು ಟೊಮೆಟೊ ಸೇರಿದಂತೆ ಇಪ್ಪತ್ತು ತಳಿಗಳ ಬೀಜಗಳನ್ನು ಒದಗಿಸಿದೆ.  ಮುಳಿಯಾರ್ ಕೃಷಿ ಭವನದ ನೆರವಿನಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಗುವಳಿ ಮಾಡಲಾಗುತ್ತದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 750 ಮನೆಗಳಲ್ಲಿ ಇದನ್ನು ಬೆಳೆಸಲಾಗುವುದು. 

               ಬೋವಿಕ್ಕಾನ ಸೌಪರ್ಣಿಕಾ ಆಡಿಟೋರಿಯಂ ಬಳಿಯ ಎರಡು ಎಕರೆ ಮಾದರಿ ನಿವೇಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ವಹಿಸಿದ್ದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್, ಹಸಿರು ಕ್ರಿಯಾ ಸೇನೆಯ ಜಿಲ್ಲಾ ಸಂಯೋಜಕ ಸುಬ್ರಮಣಿಯನ್, ಪಂಚಾಯಿತಿ ಉಪಾಧ್ಯಕ್ಷ ಎ.ಜನಾರ್ದನನ್, ಅನೀಸ್ ಮನ್ಸೂರ್, ಇ.ಮೋಹನನ್, ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯ ಕುಂಞಂಬು ನಂಬಿಯಾರ್, ಕೃಷಿ ಅಧಿಕಾರಿ ಪಿ.ರಾಮಕೃಷ್ಣನ್, ಸಿ.ಎಚ್.ಇಕ್ಬಾಲ್, ಎಂ.ಅನನ್ಯ, ಸಿ.ನಾರಾಯಣಿಕುಟ್ಟಿ, ವಿ. ರಮೇಶ ಮುದಲಪ್ಪಾರೆ, ಮೈಮೂನಾ ಸಿ. ಉಪಸ್ಥಿತರಿದ್ದು ಮಾತನಾಡಿದರು. ಕುಟುಂಬಶ್ರೀ ಸಿ.ಡಿ.ಎಸ್ ಲೆಕ್ಕಾಧಿಕಾರಿ ಪಿ.ಎಸ್.ಸಕೀನಾ, ಉಷಾ, ಅನಿತಾಕುಮಾರಿ, ಶೈಲಜಾ, ಖೈರುನ್ನೀಸಾ ಹಾಗೂ ಹಸಿರು ಕ್ರಿಯಾಸೇನೆಯ ಸದಸ್ಯರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries