HEALTH TIPS

ಮೋದಿ ಮತ್ತು ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ ತರೂರ್: ಸೋಶಿಯಲ್ ಮೀಡಿಯಾದಲ್ಲಿ ಸೈಬರ್ ವಿಮರ್ಶಕರ ಪ್ರತಿಭಟನೆಗೆ ಶಶಿ ತರೂರ್ ಪ್ರತಿಕ್ರಿಯೆ

                 ತಿರುವನಂತಪುರ: ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಟ್ವಿಟರ್‍ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ ಸಂಸದ ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಸೈಬರ್ ಸೆಲ ತೀವ್ರ ಟೀಕೆ ವ್ಯಕ್ತವಾಗಿದೆ. ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಮೇಲೆ ನಡೆದಿರುವ ದಾಳಿಯಿಂದ ಆಘಾತವಾಗಿದೆ ಎಂದು ಶಶಿ ತರೂರ್ ಟ್ವಿಟರ್ ನಲ್ಲಿ ಹೇಳಿದ್ದಾರೆ. ಕಾಂಗಿಗರ ಜೊತೆ ಕಮ್ಮಿಗಳೂ ಕೈ ಜೋಡಿಸಿದ್ದಾರೆ ಎಂದು ತರೂರ್ ಟೀಕಿಸಿರುವರು.

                    ನರೇಂದ್ರ ಮೋದಿ ಮತ್ತು ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಹೇಳುವುದನ್ನು ಮುಂದುವರಿಸುವುದಾಗಿ ಶಶಿ ತರೂರ್ ಹೇಳಿದ್ದಾರೆ. ಅವರ ರಾಜಕೀಯ ನಿಲುವನ್ನು ತಾನು ವಿರೋಧಿಸುತ್ತೇನೆ. ನಮ್ಮ ರಾಜಕೀಯ ಚರ್ಚೆಗಳಿಂದ ಮರ್ಯಾದೆಗೆ ಕುತ್ತಾಗುತ್ತದೆಯೇ ಎಂದು ಶಶಿ ತರೂರ್ ಪ್ರಶ್ನಿಸಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳ ಮಾನವೀಯತೆಯನ್ನು ಗೌರವಿಸಲು ಮತ್ತು ಒಪ್ಪಿಕೊಳ್ಳಲು ಗಾಂಧೀಜಿ ಕಲಿಸಿದ್ದಾರೆ ಎಂದು ಅವರು ಕಾಂಗ್ರೆಸ್ ಸೈಬರ್ ಹೋರಾಟಗಾರರಿಗೆ ನೆನಪಿಸಿದರು.

                      ಸೈಬರ್ ದಾಳಿಗೆ ಶಶಿ ತರೂರ್ ಮೂರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ತರೂರ್ ಅವರ ಪ್ರಕಾರ, ತಾನು ಗಾಂಧೀಜಿಯವರ ಅ|ಭಿಮಾನಿಗಳಾಗಿರುವುದರಿಂದ ಕೆಲವರು ಸಂಘಿ ಪರ ಎಂದು ಬ್ರಾಂಡ್ ಮಾಡುತ್ತಿದ್ದಾರೆ. ತಮ್ಮ 40 ವರ್ಷಗಳ ಬರವಣಿಗೆಯ ವೃತ್ತಿಜೀವನದಲ್ಲಿ ತಾನೇನು ಮಾಡುತ್ತಿರುವೆ ಎಂಬುದು ಸ್ಪಷ್ಟವಾಗಿದೆ. ಅದನ್ನು ಒಮ್ಮೆಯೂ ಓದದೇ ಇರುವವರು ಮಾತ್ರ ಸಂಘಿ ಎನ್ನಬಹುದು. ಅವರಿಗಾಗಿ ತನ್ನ ಮೌಲ್ಯವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ ಶಶಿ ತರೂರ್.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries