HEALTH TIPS

ರೈತ ನಾಯಕರಿಗಿಂತಲೂ ಪ್ರಧಾನಿ ಮೋದಿ ರೈತರಿಗಾಗಿ ಹೆಚ್ಚು ಕೆಲಸ ಮಾಡಿದ್ದಾರೆ: ಜೆ.ಪಿ ನಡ್ಡಾ

                 ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗಾಗಿ ಯಾವುದೇ ರೈತ ನಾಯಕರಿಗಿಂತ ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ ಎಂದು ಪ್ರತಿಪಾದಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ವಿರೋಧ ಪಕ್ಷಗಳು ಕುಟುಂಬ ಆಡಳಿತವನ್ನು ನಂಬುತ್ತವೆಯೇ ಹೊರತು ಪ್ರಜಾಪ್ರಭುತ್ವವನ್ನಲ್ಲ ಎಂದು ಆರೋಪಿಸಿದರು.

            ಇಲ್ಲಿನ ಚಂಪಾದೇವಿ ಪಾರ್ಕ್‌ನಲ್ಲಿ ಗೋರಖ್‌ಪುರ ಕ್ಷೇತ್ರದ ಬೂತ್ ಅಧ್ಯಕ್ಷರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ ಯಾವುದೇ ಪಕ್ಷದ ಹೆಸರನ್ನು ಹೇಳದೆ, 'ನಾವು ಸಾಂಸ್ಕೃತಿಕ ರಾಷ್ಟ್ರೀಯತೆಯೊಂದಿಗೆ ಮುನ್ನಡೆದರೆ ಅವರು (ವಿರೋಧ ಪಕ್ಷ) 'ವಂಶವಾದ್' (ರಾಜವಂಶೀಯ ರಾಜಕೀಯ) ದೊಂದಿಗೆ ಮುನ್ನಡೆಯುತ್ತಿದ್ದಾರೆ. ನಮಗೆ ರಾಷ್ಟ್ರೀಯತೆ ಮುಖ್ಯ ಹಾಗೂ ಅವರಿಗೆ 'ವಂಶವಾದವೇ ಸರ್ವಸ್ವ' ಎಂದರು.

                "ಅನೇಕ ಜನರು ರೈತರ ನಾಯಕರಾಗುತ್ತಾರೆ. ಆದರೆ ಯಾರಾದರೂ ರೈತರಿಗೆ ಏನಾದರೂ ಮಾಡಿದ್ದರೆ ಅದು ಮೋದಿ ಮಾತ್ರ" ಎಂದು ಬಿಜೆಪಿ ಅಧ್ಯಕ್ಷರು ಹೇಳಿಕೊಂಡರು.

ರೈತರ ತೀವ್ರ ವಿರೋಧಕ್ಕೆ ಕಾರಣವಾಗಿರುವ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಧಾನ ಮಂತ್ರಿ ಘೋಷಿಸಿದ ಕೆಲವು ದಿನಗಳ ನಂತರ ನಡ್ಡಾ ಈ ಹೇಳಿಕೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries