ಇಡುಕ್ಕಿ: ಇಡುಕ್ಕಿ ಮತ್ತು ಚೆರುತೋಣಿ ಅಣೆಕಟ್ಟುಗಳಲ್ಲಿ ಷಟರ್ ತೆರೆದರೂ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಅಣೆಕಟ್ಟೆಗೆ ನೀರಿನ ಹರಿವು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಏಳು ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ನೀರಾವರಿ ಅಣೆಕಟ್ಟುಗಳಿಗೂ ರೆಡ್ ಅಲರ್ಟ್ ನೀಡಲಾಗಿದೆ.
ಇಡುಕ್ಕಿ ಅಣೆಕಟ್ಟಿನ ನೀರಿನ ಮಟ್ಟ 2399.10 ಅಡಿ ಏರಿಕೆಯಾಗಿದೆ. ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಈಗಲೂ ಮಳೆಯಾಗುತ್ತಿದೆ. ಇದೇ ವೇಳೆ ಮುಲ್ಲಪೆರಿಯಾರ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 140.35 ಅಡಿಗಳಿಗೆ ಏರಿಕೆಯಾಗಿದೆ. ಇಡುಕ್ಕಿಯಲ್ಲೂ ಅಲ್ಲಲ್ಲಿ ಮಳೆಯಾಗಿದೆ. ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿರುವುದರಿಂದ, ತುರ್ತಾಗಿ ನೀರು ಬಿಡಬೇಕಾಗಿಲ್ಲ ಎಂದು ಕೆಎಸ್ಇಬಿ ಮಾಹಿತಿ ನೀಡಿದೆ.
ನೀರಿನ ಮಟ್ಟ ಏರಿಕೆಯಿಂದಾಗಿ ಚೆರುತೋಣಿ ಅಣೆಕಟ್ಟಿನ ಮೂರನೇ ಷಟರ್ ನ್ನು ನಿನ್ನೆ 40 ಸೆಂ.ಮೀ ಹೆಚ್ಚಿಸಲಾಗಿದೆ. 30ರಿಂದ 40 ಕ್ಯುಮೆಕ್ಸ್ ನೀರು ಹರಿಸಲಾಗಿದೆ. ನಿನ್ನೆ ಇಡುಕ್ಕಿ ಅಣೆಕಟ್ಟು ಕೂಡ ತೆರೆಯಲಾಗಿದೆ.