HEALTH TIPS

ಗರ್ಭಗೃಹ ತೆರೆದ ಶಬರಿಮಲೆ: ನಾಳೆಯಿಂದ ಭಕ್ತರಿಗೆ ಪ್ರವೇಶ; ಭಾರೀ ನಿಯಂತ್ರಣ

                                          

                  ಪತ್ತನಂತಿಟ್ಟ: ಮಂಡಲ ಮಕರ ಬೆಳಕು ಪೂಜೆಗಾಗಿ ಶಬರಿಮಲೆ ಶ್ರೀ ಧರ್ಮಶಾಸ್ತಾ ದೇವಸ್ಥಾನದ ಗರ್ಭಗೃಹದ ಬಾಗಿಲನ್ನು ತೆರೆಯಲಾಗಿದೆ. ತಂತ್ರಿ ಕಂಠಾರರ್ ಮಹೇಶ್ ಮೋಹನರ್ ನೇತೃತ್ವದಲ್ಲಿ  ಮೇಲ್ಶಾಂತಿ ವಿ.ಕೆ.ಜಯರಾಜ್ ಪೋತ್ತಿ ಅವರು ಇಂದು ಸಂಜೆ ದೇವಸ್ಥಾನದ ಬಾಗಿಲು ತೆರೆದು ದೀಪ ಬೆಳಗಿಸಿದರು. ಶಬರಿಮಲೆ ಮತ್ತು ಮಾಳಿಗಪ್ಪುರ ಮೇಲ್ಶಾಂತಿಯವರ ಪೀಠಾರೋಹಣ ಕಾರ್ಯಕ್ರಮ ನಡೆಯಿತು.

                   ದೇವಸ್ವಂ ಮಂಡಳಿ ಅಧಿಕಾರಿಗಳು, ಪಂದಳಂ ಅರಮನೆ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು ಈಗಾಗಲೇ ಶಬರಿಮಲೆ ತಲುಪಿದ್ದಾರೆ. ನಾಳೆಯಿಂದ ವೃಶ್ಚಿಕ ರಾಶಿಯ ಮುಹೂರ್ತದಲ್ಲಿ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಕ್ತಾದಿಗಳ ಆಗಮನಕ್ಕೆ ಒಂದಷ್ಟು ನಿಯಂತ್ರಣಗಳೂ ಇವೆ. ಪ್ರತಿದಿನ ಮೂವತ್ತು ಸಾವಿರ ಜನರಿಗೆ ಭೇಟಿ ನೀಡಲು ಅವಕಾಶವಿದೆ. ಮೂರು ದಿನಗಳ ಕಾಲ ಪಂಪಾ ಸ್ನಾನಕ್ಕೆ ಅವಕಾಶವಿಲ್ಲ.

                 ಸ್ವಾಮಿ ಅಯ್ಯಪ್ಪನ್ ರಸ್ತೆಯ ಮೂಲಕ ಭಕ್ತರು ಪ್ರವೇಶಿಸಬಹುದು. ಅರಣ್ಯ ಮಾರ್ಗದಲ್ಲಿ ಹೋಗಲು ಅವಕಾಶವಿಲ್ಲ.ಕೋವಿಡ್ ಋಣಾತ್ಮಕ ಫಲಿತಾಂಶ ದಾಖಲೆಯೊಂದಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಅಥವಾ ಎರಡು-ಡೋಸ್ ವ್ಯಾಕ್ಸಿನೇಷನ್ ಪ್ರಮಾಣಪತ್ರವು ಸಂದರ್ಶಕರಿಗೆ ಕಡ್ಡಾಯವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries