ತಿರುವನಂತಪುರಂ: ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ತಾನು ಕ್ಯಾನ್ಸರ್ ರೋಗಿಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳು ಇನ್ನೂ ಸಮರ್ಪಕವಾಗಿಲ್ಲ ಎಂದು ಕೊಡಿಯೇರಿ ಅಭಿಪ್ರಾಯಪಟ್ಟರು. ಕಿಮೊಥೆರಪಿಗಾಗಿ ರೋಗಿಗಳು ಸರದಿಯಲ್ಲಿ ನಿಲ್ಲಬೇಕಾಗಿದೆ. ಕ್ಯಾನ್ಸರ್ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸಬೇಕು ಅಥವಾ ಉಚಿತ ಚಿಕಿತ್ಸೆ ನೀಡಬೇಕು ಎಂದು ಕೊಡಿಯೇರಿ ಅಭಿಪ್ರಾಯಪಟ್ಟರು.
ಕ್ಯಾನ್ಸರ್ ಮತ್ತು ಬದುಕುಳಿಯುವಿಕೆಯ ಕುರಿತು ತಿರುವನಂತಪುರ ಆಂಕೊಲಾಜಿ ಕ್ಲಬ್ನ 10 ನೇ ವಾರ್ಷಿಕ ಸಮ್ಮೇಳನದಲ್ಲಿ ಕೊಡಿಯೇರಿ ಮಾತನಾಡುತ್ತಿದ್ದರು.
‘ನನಗೆ ಕ್ಯಾನ್ಸರ್ ಇದೆ. 2 ವರ್ಷಗಳಿಂದ ಚಿಕಿತ್ಸೆ ನಡೆಯುತ್ತಿದೆ. ರೋಗದ ವಿವರಗಳನ್ನು ಬಹಿರಂಗಪಡಿಸಲು ನಾನು ಹಿಂಜರಿಯುವುದಿಲ್ಲ ಎಂದು ಅವರು ಹೇಳಿದರು.
ಕ್ಯಾನ್ಸರ್ ಪತ್ತೆಯಾದರೆ ಅದಕ್ಕೆ ಚಿಕಿತ್ಸೆ ನೀಡಬೇಕು. ಮಧುಮೇಹ ಪರೀಕ್ಷೆಯ ಭಾಗವಾಗಿ 2 ವರ್ಷಗಳ ಹಿಂದೆ ರಕ್ತವನ್ನು ಪರೀಕ್ಷಿಸಲಾಯಿತು. ರಕ್ತ ಪರೀಕ್ಷೆಯಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. ಸ್ಕ್ಯಾನ್ ಮಾಡಿದಾಗ ಮೇದೋಜೀರಕ ಗ್ರಂಥಿಗೆ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಭಾಗಶಃ ತೆಗೆದುಹಾಕಲಾದ ಮೇದೋಜ್ಜೀರಕ ಗ್ರಂಥಿಯೊಂದಿಗೆ ಬದುಕು ಮುಂದುವರಿಸುತ್ತಿರುವೆ. ಶಸ್ತ್ರಚಿಕಿತ್ಸೆಯ ಮೂಲಕ ರೋಗವು ಸಾಕಷ್ಟು ವಾಸಿಯಾಗಿದೆ ಎಂದು ಕೊಡಿಯೇರಿ ಹೇಳಿದರು.