HEALTH TIPS

‘ಚಿನ್ನದ ಮರವಾಗಿದ್ದರೂ ಛಾವಣಿಗೆ ಒರಗಿದರೆ ಕಡಿಯಬೇಕು; ನಾಗರಿಕನಾಗಿದ್ದರೂ, ವಿಷಯಗಳನ್ನು ಗುರುತಿಸುವ ಸಾಮಥ್ರ್ಯವಿಲ್ಲ; ತರೂರರನ್ನು ಟೀಕಿಸಿದ ರಾಜಮೋಹನ್ ಉಣ್ಣಿತ್ತಾನ್

                  ತಿರುವನಂತಪುರ: ಕೆ ರೈಲು ವಿಚಾರದಲ್ಲಿ ಯುಡಿಎಫ್ ವಿರುದ್ಧ ನಿಲುವು ತಳೆದಿರುವ ಸಂಸದ ಶಶಿ ತರೂರ್ ರನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಕಟುವಾಗಿ ಟೀಕಿಸಿದ್ದಾರೆ. ಮರವು ಚಿನ್ನವಾಗಿದ್ದರೂ, ಛಾವಣಿಯ ಮೇಲೆ ಒರಗಿದರೆ ಅದನ್ನು ಕಡಿಯಬೇಕು ಎಂದು ಉಣ್ಣಿತ್ತಾನ್ ಟೀಕೆ ವ್ಯಕ್ತಪಡಿಸಿದರು. 

                          ಜಾಗತಿಕ ಪ್ರಜೆಯಾಗಿದ್ದರೂ, ತರೂರ್ ಅವರಿಗೆ ವಿಷಯಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ಬಾರಿ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಕಾಂಗ್ರೆಸ್ ಕಾರ್ಯಕರ್ತರ ವಿರೋಧ ಎದುರಿಸಬೇಕಾಗುತ್ತದೆ ಎಂದು ರಾಜಮೋಹನ್ ಉಣ್ಣಿತ್ತಾನ್ ಹೇಳಿದ್ದಾರೆ.

                  ಕೆ ರೈಲ್ ಯೋಜನೆ ಕುರಿತ ಕಾಂಗ್ರೆಸ್ ನಿಲುವಿನ ವಿರುದ್ಧ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹೊಗಳಿ ಶಶಿ ತರೂರ್ ಸಂಸದರು ವಿವಾದಕ್ಕೀಡಾಗಿದ್ದಾರೆ. ಮೇಲಾಗಿ, ಯೋಜನೆ ವಿರೋಧಿಸಿ ಯುಡಿಎಫ್ ಸಂಸದರು ಕೇಂದ್ರ ಸಚಿವರಿಗೆ ಕಳುಹಿಸಿದ್ದ ಪತ್ರಕ್ಕೆ ಸಹಿ ಹಾಕಲು ಶಶಿ ತರೂರ್ ಸಿದ್ಧರಿರಲಿಲ್ಲ. ಈ ಕಾರಣಕ್ಕೆ ಕಾಂಗ್ರೆಸ್‍ನ ಒಂದು ವರ್ಗ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದನ್ನೇ ರಾಜಮೋಹನ್ ಉಣ್ಣಿತ್ತಾನ್ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries