ಕಾಸರಗೋಡು: ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ ಅಂಗವಾಗಿ ಡಿ. 14ರಂದು ಇಂಧನ ಸಂರಕ್ಷಣಾ ರ್ಯಾಲಿ ಮತ್ತು ಇಂಧನ ಉಳಿತಾಯದ ಬಗ್ಗೆ ತರಗತಿ ನಡೆಯಲಿದೆ. ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಿಂದ ಇಂಧನ ಸಂರಕ್ಷಣಾ ರ್ಯಾಲಿ ಆರಂಭಗೊಂಡು, ನಗರಸಭಾಂಗಣ ವರೆಗೆ ನಡೆಯಲಿದೆ.
ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ರ್ಯಾಲಿಗೆ ಹಸಿರುನಿಶಾನಿ ತೋರಿಸುವರು. ನಗರಸಭಾ ಕಚೇರಿ ಸನಿಹದ ವನಿತಾ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೆ.ಟಿ ಕರುಣಾಕರನ್ ತರಗತಿ ನಡೆಸುವರು. ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸುವರು. ಕಾಸರಗೋಡು ನಗರಸಭಾ ಅಧ್ಯಕ್ಷ ವಕೀಲ ವಿ.ಎಂ ಮುನೀರ್ ಅಧ್ಯಕ್ಷತೆ ವಹಿಸುವರು.




