ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಭಕ್ತರಾದ, ಬೆಂಗಳೂರು ಮೂಲದ ಮಲಯಾಳಿ ಉದ್ಯಮಿಯು 18,001 ತುಪ್ಪದ ತೆಂಗಿನಕಾಯಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇದು, ಈವರೆಗೆ ನೀಡಿದ ಅಧಿಕ ಸಂಖ್ಯೆಯ ಕೊಡುಗೆಯಾಗಿದೆ. ಇದಕ್ಕಾಗಿ ₹ 18 ಲಕ್ಷ ಶುಲ್ಕ ಪಾವತಿಸಿದ್ದಾರೆ.
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಭಕ್ತರಾದ, ಬೆಂಗಳೂರು ಮೂಲದ ಮಲಯಾಳಿ ಉದ್ಯಮಿಯು 18,001 ತುಪ್ಪದ ತೆಂಗಿನಕಾಯಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇದು, ಈವರೆಗೆ ನೀಡಿದ ಅಧಿಕ ಸಂಖ್ಯೆಯ ಕೊಡುಗೆಯಾಗಿದೆ. ಇದಕ್ಕಾಗಿ ₹ 18 ಲಕ್ಷ ಶುಲ್ಕ ಪಾವತಿಸಿದ್ದಾರೆ.
ದೇವಸ್ಥಾನದ ಪ್ರಮುಖ ಹರಕೆಗಳಲ್ಲಿ ತುಪ್ಪದ ತೆಂಗಿನಕಾಯಿ ಒಂದು. ಇದಕ್ಕಾಗಿ, 2,280 ಕೆ.ಜಿ. ತುಪ್ಪ ಮತ್ತು 7.5 ಟನ್ ತೆಂಗಿನಕಾಯಿ ಬೇಕು. 10 ಮಂದಿ ಅರ್ಚಕರು ಎರಡು ದಿನದಲ್ಲಿ ತೆಂಗಿನಕಾಯಿಗಳಿಗೆ ತುಪ್ಪ ತುಂಬಿದ್ದು, ಟ್ರ್ಯಾಕ್ಟರ್ನಲ್ಲಿ ದೇಗುಲಕ್ಕೆ ಸಾಗಿಸಲಾಗಿದೆ.
ಕೊಡುಗೆ ನೀಡಿದ ಸಂದರ್ಭದಲ್ಲಿ ಭಕ್ತರು ಹಾಜರಿರಲಿಲ್ಲ. ಆದರೆ, ಅವರ ಸಂಬಂಧಿಕರು ಮತ್ತು ಗೆಳೆಯರು ಹಾಜರಿದ್ದರು.
18,001 ತೆಂಗಿನಿಂದ ಅಭಿಷೇಕ ಮಾಙಡುವುದು ಅವರ ಹರಿಕೆಯಾಗಿತ್ತು. ಆದರೆ ಅಭಿಷೇಕಕ್ಕಾಗಿ ಸುಮಾರು 20 ಸಾವಿರ ತೆಂಗಿನಕಾಯಿಗಳನ್ನು ಸಿದ್ಧಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ದೇವಸ್ವಂ ಬೋರ್ಡ್ ಗೆ 18 ಲಕ್ಷ ರೂ. ಆದಾಯ ಲಭಿಸಿದೆ. ಅಭಿಷೇಕಕ್ಕೆ 2280 ಕೆಜಿ ತುಪ್ಪ ಮತ್ತು 7.5 ಟನ್ ತೆಂಗಿನಕಾಯಿ ಬಳಸಲಾಗಿ.10 ಮಂದಿ ಪುರೋಹಿತರ ತಂಡ ಶ್ರೀಕಾಕುಳಂ ಬಳಿಯಿಂದ ತೆಂಗಿನಕಾಯಿಯನ್ನು ವ್ಯವಸ್ಥೆಗೊಳಿಸಲಾಗಿತ್ತು.
ಕಿಲಿಮನೂರು ಮೂಲದ ಉಣ್ಣಿಕೃಷ್ಣನ್ ಪೆÇಟ್ಟಿ ಅವರು ಮೊದಲ ತುಪ್ಪದ ತೆಂಗಿನಕಾಯಿ ತಯಾರಿ ಆರಂಭಿಸಿದರು. ದೇವಸ್ವಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಕುಮಾರ ವಾರಿಯರ್ ಮಾತನಾಡಿ, ಭಕ್ತರೊಬ್ಬರು ಅಯ್ಯಪ್ಪನಿಗೆ ಇಷ್ಟು ಪ್ರಮಾಣದ ತೆಂಗಿನ ತುಪ್ಪದ ಅಭಿಷೇಕ ಮಾಡಿದ್ದು ಇದೇ ಮೊದಲು ಎಂದಿರುವರು.
ತುಪ್ಪ ತುಂಬಿದ ತೆಂಗಿನಕಾಯಿಯನ್ನು Á್ರ್ಯಕ್ಟರ್ ಮೂಲಕ ಪಂಪಾದಿಂದ ಸನ್ನಿಧಾನಕ್ಕೆ ತರಲಾಯಿತು. ವರ್ಷಾನುಗಟ್ಟಲೆ ದರ್ಶನ ಪಡೆಯುತ್ತಿರುವ ಭಕ್ತನಿಗೆ ಅಯ್ಯಪ್ಪನ ಆಶೀರ್ವಾದದಿಂದ ತಾನು ಬಯಸಿದ್ದನ್ನು ಸಾಧಿಸಲು ತುಪ್ಪದ ಅಭಿಷೇಕವನ್ನು ಕಾಣಿಕೆಯಾಗಿ ಸಲ್ಲಿಸಲಾಯಿತು. 18 ಮೆಟ್ಟಿಲುಗಳು ಮತ್ತು ಬೆಟ್ಟಗಳನ್ನು ಕಲ್ಪಿಸಿ 18,000 ತೆಂಗಿನಕಾಯಿಗಳ ಅಭಿಷೇಕವನ್ನು ಮಾಡಲಾಗುತ್ತದೆ.