ಮಧೂರು: ಕೂಡ್ಲು ಶ್ರೀ ಚಾಮುಂಡೇಶ್ವರೀ ಕಾಲಬೈರವ ದೇವಸ್ಥಾನದಲ್ಲಿ ಜ.29 ರಂದು ಸೂರ್ಯೋದಯಕ್ಕೆ ಪ್ರಾರಂಭಗೊಂಡು ಮರುದಿನ ಸೂರ್ಯೋದಯದ ತನಕ 70 ನೇ ಏಕಾಹ ಭಜನೆ ನಡೆಯಲಿದೆ.
ಪ್ರಾತ:ಕಾಲ 5 ಕ್ಕೆ ಗಣಪತಿ ಹೋಮ, 6 ಕ್ಕೆ ದೀಪ ಪ್ರತಿಷ್ಠೆ, ಮಧ್ಯಾಹ್ನ 11 ರಿಂದ ಸಹಸ್ರನಾಮ ಕುಂಕುಮಾರ್ಚನೆ, ಮಧ್ಯಾಹ್ನ 12 ಕ್ಕೆ ಹೂವಿನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 8 ಕ್ಕೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಹುಲ್ಪೆ ಮೆರವಣಿಗೆ, ರಾತ್ರಿ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಜ.30 ರಂದು ಪ್ರಾತ:ಕಾಲ 6 ಕ್ಕೆ ದೀಪ ವಿಸರ್ಜನೆ ನಡೆಯಲಿದೆ.

