HEALTH TIPS

ಕುಂಬಳೆ ಪ್ರೆಸ್ ಫೋರಂ ಸಭಾಂಗಣಕ್ಕೆ ನಾಂಗಿ ಅಬ್ದುಲ್ಲ ಮಾಸ್ಟರ್ ಹೆಸರಿರಿಸಲು ತೀರ್ಮಾನ


       ಕುಂಬಳೆ: ಕುಂಬಳೆ ಪತ್ರಕರ್ತರ ಸಂಘಟನೆಯಾದ ಪ್ರೆಸ್ ಪೋರಂ ಸಭಾಂಗಣಕ್ಕೆ ಹಿರಿಯ ಪತ್ರಕರ್ತ ನಾಂಗಿ ಅಬ್ದುಲ್ಲಾ ಮಾಸ್ತರ್ ಅವರ ಹೆಸರನ್ನು ಇರಿಸಲು ಪ್ರೆಸ್ ಪೋರಂ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.
        ಅಧ್ಯಕ್ಷ ಲತೀಫ್ ಉಪ್ಪಳ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ. ಪ್ರೆಸ್ ಪೋರಂ  ಸಭಾಂಗಣಕ್ಕೆ ಕುಂಬಳೆಯವರೇ ಆದ ಅತ್ಯುತ್ತಮ ಪತ್ರಕರ್ತರೂ ಆಗಿದ್ದ ನಾಂಗಿ ಮಾಸ್ತರರ ಹೆಸರನ್ನು ನಾಮಕರಣ ಮಾಡಿರುವುದು ಕುಂಬಳೆ ಮಾಧ್ಯಮ ಸಿಬ್ಬಂದಿಗೆ ಹೆಮ್ಮೆಯ ಸಾಧನೆ ಎಂದು ಸಭೆ ಅಭಿಪ್ರಾಯಪಟ್ಟಿತು.
         ಕೆ.ಎಂ.ಎ ಸತಾರ್, ಅಬ್ದುಲ್ ಲತೀಫ್ ಉಳುವಾರ್, ಅಬ್ದುಲ್ ಲತೀಫ್ ಕುಂಬಳೆ, ರಫೀಕ್ ಬಿ.ಐ, ಧನರಾಜ್ ಐಲ್, ಝುಬ್ಯೆರ್,  ಪುರುಷೋತ್ತಮ ಭಟ್ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯದರ್ಶಿ ಅಬ್ದುಲ್ಲ ಕಾರವಲ್ ಸ್ವಾಗತಿಸಿ,ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries