ತಿರುವನಂತಪುರ: ಕೇರಳದಲ್ಲಿ ಪಡಿತರ ವಿತರಣೆ ಬಿಕ್ಕಟ್ಟಿನಲ್ಲಿದೆ. ಇ-ಪೋಸ್ ಯಂತ್ರಗಳ ನಿಶ್ಚಲತೆಯಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪಡಿತರ ಸ್ಥಗಿತಗೊಂಡಿದೆ. ಮೂರು ದಿನಗಳಿಂದ ಸರಕು ಖರೀದಿಸಲು ಜನ ಬಂದರೂ ಇದೇ ಸ್ಥಿತಿ ಎನ್ನುತ್ತಾರೆ ಪಡಿತರ ವ್ಯಾಪಾರಿಗಳು. ದೂರು ನೀಡಿದರೂ ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ ಎಂಬ ಆರೋಪಗಳಿವೆ.
ಯಂತ್ರದ ಬಿಕ್ಕಟ್ಟಿನ ಬಗ್ಗೆ ಈ ಹಿಂದೆಯೇ ಅಧಿಕಾರಿಗಳಿಗೆ ತಿಳಿಸಿದ್ದರೂ ಕಳೆದ ಮೂರು ದಿನಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಡಿತರ ಅಂಗಡಿ ಮಾಲೀಕರು ದೂರಿರುವರು. ಪಡಿತರ ವರ್ತಕರ ಸಂಘ ಕೂಡ ನಿನ್ನೆ ಬಿಕ್ಕಟ್ಟು ಬಗ್ಗೆ ಸಚಿವರ ಕಚೇರಿಗೆ ಮಾಹಿತಿ ನೀಡಿದೆ. ಆದರೆ ತಾಂತ್ರಿಕ ಒಪ್ಪಂದ ಇನ್ನೂ ಬಗೆಹರಿದಿಲ್ಲ. ಸಮಸ್ಯೆ ಬಗೆಹರಿಸುವಂತೆ ಆಹಾರ ಸಚಿವರು ಸೂಚನೆ ನೀಡಿದ್ದಾರೆ ಎಂದರು.
ಆದರೆ ರಾಜ್ಯದಲ್ಲಿ ಇ-ಪೋಸ್ ಯಂತ್ರಗಳು ನಿಶ್ಚಲಗೊಂಡಿರುವುದು ಇದೇ ಮೊದಲಲ್ಲ. ಸಮಸ್ಯೆ ಸರಿಪಡಿಸದೆ ಸರ್ಕಾರಕ್ಕೆ ಬೇರೆ ದಾರಿಯೇ ಇಲ್ಲ ಎಂಬುದು ಪಡಿತರ ವ್ಯಾಪಾರಿಗಳ ದೂರು. ಸರ್ವರ್ ಕ್ರ್ಯಾಶ್ ಆದಲ್ಲಿ ಅಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಬೇಕಾಗುತ್ತದೆ ಎನ್ನುತ್ತಾರೆ.




