ಆಲಪ್ಪುಳ: ಆಲಪ್ಪುಳದಲ್ಲಿ ತಂಡವೊಂದು ಯುವಕನನ್ನು ಇರಿದು ಬರ್ಬರವಾಗಿ ಕೊಲೆಗೈದಿದೆ. ಮಾರ್ಯಂಕ್ಕೋಡ್ ಕಿಳಕ್ಕೇಕರ ನಿವಾಸಿ ಶರತ್ಚಂದ್ರ ಮೃತವ್ಯಕ್ತಿ. ಹರಿಪ್ಪಾಡ್ ಕುಮಾರಪುರಂನಲ್ಲಿ ಗುರುವಾರ ನಸುಕಿಗೆ ಘಟನೆ.
ದೇವಸ್ಥಾನವೊಂದರ ಉತ್ಸವದ ಸಂದರ್ಭ ಉಂಟಾದ ವಾಗ್ವಾದ ಕೊಲೆಯಲ್ಲಿ ಪರ್ಯವಸಾನ ಕಂಡಿತ್ತು. ಮಾದಕದ್ರವ್ಯ ಸಾಗಾಟಗಾರರ ತಂಡ ಕೃತ್ಯವೆಸಗಿರುವುದಾಗಿ ಬಿಜೆಪಿ ಆರೋಪಿಸಿದೆ. ನಂದುಪ್ರಕಾಶನ್ ಎಂಬಾತನ ನೇತೃತ್ವದ ಏಳು ಮಂದಿಯ ತಂಡ ಶರತ್ಚಂದ್ರ ಅವರನ್ನು ಇರಿದಿದೆ. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಅಲಪ್ಪುಳ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಾದಕದ್ರವ್ಯ ವಿತರಣೆಯಾಗುತ್ತಿದ್ದು, ಮಾದಕದ್ರವ್ಯ ಮಾಫಿಯಾ ಜಿಲ್ಲೆಯಲ್ಲಿ ಅಶಾಂತಿಹುಟ್ಟುಹಾಕುತ್ತಿರುವುದಾಗಿಯೂ ದೂರುಗಳಿದೆ.