ಕಾಸರಗೋಡು: ಹವಾಮಾನ ಬದಲಾವಣೆಯ ಸಮಸ್ಯೆಗಳಿಂದ ಕೇರಳದಲ್ಲಿ ಜಲಸಂರಕ್ಷಣಾ ಚಟುವಟಿಕೆಗಳು ಸಾಧ್ಯವಾಗದ ಕಾರಣ ಕೇಂದ್ರ ಹಣಕಾಸು ಆಯೋಗದ ಹಣವನ್ನು ಇತರ ಪ್ರದೇಶಗಳಿಗೆ, ವಿಶೇಷವಾಗಿ ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಮತ್ತು ಸಿ.ಎಚ್.ಸಿ ಗಳಿಗೆ ಬಳಸಲು ಅನುಮತಿ ಇದೆಯೇ? ಜಲ ಸಂರಕ್ಷಣೆ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರ ಸರ್ಕಾರ-ಸಿಎಫ್ಸಿ ಶೇ.60 ರಷ್ಟು ಟಿಐಡಿ ಗ್ರಾಂಡ್ ನೀಡುತ್ತಿದ್ದರೂ, ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಮೊತ್ತ ಅಗತ್ಯವಿರುವುದರಿಂದ ಗ್ರಾಮ ಪಂಚಾಯಿತಿಗಳು ಇತರ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲಿಖಿತ ಉತ್ತರ ನೀಡಿದ್ದಾರೆ ಎಂದು ಸಂಸದ ರಾಜಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಹದಿನೈದನೇ ಹಣಕಾಸು ಆಯೋಗವು ಪ್ರಸ್ತುತ ಆರೋಗ್ಯ ಕ್ಷೇತ್ರಕ್ಕೆ ಸಿಎಫ್ ಸಿ ನಿಧಿಗಳನ್ನು ಬಳಸಲು ಸರ್ಕಾರವು ಅನುಮೋದಿಸುವುದಿಲ್ಲ. ಆದರೆ 2024 ರ ವೇಳೆಗೆ ಎಲ್ಲಾ ಗ್ರಾಮೀಣ ಮನೆಗಳಿಗೆ ನಲ್ಲಿ ನೀರನ್ನು ಒದಗಿಸಲು ರಾಜ್ಯಗಳ ಸಹಯೋಗದೊಂದಿಗೆ ಜಲ ಜೀವನ್ ಮಿಷನ್ (ಎಎಒ) ಮೂಲಕ ಭಾರತ ಸರ್ಕಾರ ಜಾರಿಗೊಳಿಸಲು ಶ|ಇಫಾರಸು ಮಾಡಲಾಗಿದೆ ಎಂದು ಹೇಳಿದೆ. ಆರನೇ ಶೆಡ್ಯೂಲ್ ಅಡಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಮೀಸಲಿಟ್ಟ ಒಟ್ಟು ಅನುದಾನದಲ್ಲಿ 60 ಪ್ರತಿಶತವನ್ನು ಕುಡಿಯುವ ನೀರು ಸರಬರಾಜು, ಮಳೆನೀರು ಕೊಯ್ಲು ಮತ್ತು ನೈರ್ಮಲ್ಯಕ್ಕೆ (ಹಾಗೆಯೇ ಕಡಲು ಕೊರೆತ ಅನುದಾನ) ಮೀಸಲಿಡಲಾಗಿದೆ ಮತ್ತು 40 ಪ್ರತಿಶತ ಬಳಸಬೇಕು. ಮೂಲಭೂತ ಸೇವೆಗಳನ್ನು ಸುಧಾರಿಸಲು ಪಂಚಾಯತ್ ರಾಜ್ ಸಂಸ್ಥೆಗಳ ವಿವೇಚನೆಯಿಂದ ಇದನ್ನು ಮಾಡಬಹುದಾಗಿದೆ.
ಕೇಂದ್ರ ಹಣಕಾಸು ಆಯೋಗದ ಅನುದಾನವನ್ನು ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕಾಗಿ ಜಲಜೀವನ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಎಸ್ಬಿಎಂಜಿಯಂತಹ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳ ಜೊತೆಯಲ್ಲಿ ಬಳಸಿಕೊಳ್ಳಬಹುದು ಎಂದು ಸಚಿವರು ಸೂಚಿಸಿರುವರು. ಆದರೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಗರಿಷ್ಠ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು.ಆದಾಗ್ಯೂ, ಕೇಂದ್ರವು ನೀಡಿರುವ ಮಾರ್ಗಸೂಚಿಗಳನ್ನು ಬದಲಾಯಿಸುವ ಮೂಲಕ ಕೇರಳದ ಪಂಚಾಯತ್ ಗಳು ಐದನೇ ಹಣಕಾಸು ಆಯೋಗದ ನಿಧಿಯನ್ನು (ಎಎಇ ಟೈಡ್) ಮಂಜೂರು ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಆಶಿಸಿದ್ದಾರೆ ಎಂದು ರಾಜಮೋಹನ್ ಉಣ್ಣಿತ್ತಾನ್ ಹೇಳಿದರು. ಜಲ ಜೀವನ್ ಮಿಷನ್ಗಾಗಿ ಕೇರಳದಲ್ಲಿ, ಆ ಮೂಲಕ ಸಿಎ|ಫ್ ಸಿ ನಿಧಿಯ ಬಳಕೆಯನ್ನು ವೇಗಗೊಳಿಸುತ್ತದೆ.




