HEALTH TIPS

ಹಿಜಾಬ್ ಬಗ್ಗೆ ಮಾತನಾಡಬೇಡಿ; ಷರಿಯಾ ವಿರುದ್ಧ ನಿಲುವು ತಳೆದವರಿಂದ ಹೆಚ್ಚೇನೂ ನಿರೀಕ್ಷಿಸಲಾಗುವುದಿಲ್ಲ; ರಾಜ್ಯಪಾಲರ ವಿರುದ್ಧ ಮುಸ್ಲಿಂ ಲೀಗ್ ಸಿಟ್ಟು

               ತಿರುವನಂತಪುರ: ಹಿಜಾಬ್ ವಿಚಾರದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ನಿಲುವಿಗೆ ಮುಸ್ಲಿಂ ಲೀಗ್ ಟೀಕೆ ವ್ಯಕ್ತಪಡಿಸಿದೆ. ರಾಜ್ಯಪಾಲರು ಶರಿಯಾ ಕಾನೂನಿಗೆ ವಿರುದ್ಧವಾದ ನಿಲುವು ತಳೆದ ವ್ಯಕ್ತಿ. ಹಿಜಾಬ್ ವಿಚಾರದಲ್ಲೂ ರಾಜ್ಯಪಾಲರು ಇದೇ ನಿಲುವು ತಳೆದಿದ್ದಾರೆ. ರಾಜ್ಯಪಾಲರಿಂದ ಹೆಚ್ಚಿನದನ್ನು ನಿರೀಕ್ಷಿಸುವುದಿಲ್ಲ ಎಂದು ಲೀಗ್ ಮುಖಂಡ ಸಾದಿಕಲಿ ಶಿಹಾಬ್ ಹೇಳಿರುವರು.

                   ಇಸ್ಲಾಂ ನಂಬಿಕೆಯ ಪ್ರಕಾರ ಹಿಜಾಬ್ ಕಡ್ಡಾಯವಲ್ಲ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದರು. ಹಿಜಾಬ್ ವಿವಾದದ ಹಿಂದೆ ಇರುವವರು ಮುಸ್ಲಿಂ ಹುಡುಗಿಯರನ್ನು ಮುಖ್ಯವಾಹಿನಿಯಿಂದ ದೂರವಿಡಲು ಪಿತೂರಿ ನಡೆಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಅಧ್ಯಯನದ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಮುಂಚೂಣಿಯಲ್ಲಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದ್ದರು.

                ಶಿಕ್ಷಣ ಸಂಸ್ಥೆಗಳಲ್ಲಿ ನಿಯಮಗಳ ಅನುಸರಣೆ ಉಡುಗೆ ಸ್ವಾತಂತ್ರ್ಯವನ್ನು ನಿರಾಕರಿಸುವುದಿಲ್ಲ ಎಂಬುದು ರಾಜ್ಯಪಾಲರು ತಿಳಿಸಿದ್ದರು. ನಿಯಮಗಳನ್ನು ಪಾಲಿಸಬೇಕು ಎಂದು ರಾಜ್ಯಪಾಲರು ಆಗ್ರಹಿಸಿದರು. ರಾಜ್ಯಪಾಲರ ನಿಲುವಿನ ವಿರುದ್ಧ ಲೀಗ್ ಹರಿಹಾಯ್ದಿದೆ. 

                ಇದಕ್ಕೂ ಮುನ್ನ ರಾಜ್ಯಪಾಲರು ಹಿಜಾಬ್ ವಿವಾದದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದರು. ಪ್ರವಾದಿಯವರ ಕಾಲದಲ್ಲೂ ಮಹಿಳೆಯರು ಹಿಜಾಬ್ ನ್ನು ವಿರೋಧಿಸುತ್ತಿದ್ದರು ಎಂದು ಹೇಳಿದ್ದರು. ಇಸ್ಲಾಮಿನ ಇತಿಹಾಸದಲ್ಲಿ ಹೆಂಗಸರೂ ಹಿಜಾಬ್‍ಗೆ ವಿರುದ್ಧವಾಗಿದ್ದಾರೆ. ಸೌಂದರ್ಯ ಮರೆಯಾಗಬಾರದು ಮತ್ತು ದೇವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ರಾಜ್ಯಪಾಲರು ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries