HEALTH TIPS

ಪುದುಕೋಳಿಯಲ್ಲಿ ವಿವೇಕಾನಂದ ಪ್ರೆಂಡ್ಸ್ ಅಸ್ತಿತ್ವಕ್ಕೆ

                 ಬದಿಯಡ್ಕ: ಸಮಾಜದ ಸರ್ವತೋಮುಖ ಅಭಿವೃದ್ದಿಗೆ ತೊಡಗಿಸಿಕೊಳ್ಳುವಲ್ಲಿ ಯುವ ಸಮೂಹ ಆಸಕ್ತಿಯಿಂದ ಮುಂದೆಬಂದು ವ್ಯಕ್ತಿ, ಸಮಾಜ ಹಾಗೂ ಆ ಮೂಲಕ ದೇಶದ ಬೆಳವಣಿಗೆಗೆ ಪೂರಕ ಚಟುವಟಿಕೆ ನಡೆಸಬೇಕಾದುದು ಕರ್ತವ್ಯ. ಸಾಮಾಜಿಕ ಅಸಮತೋಲನ ಹೋಗಲಾಡಿಸುವಲ್ಲಿ ಸ್ಥಳೀಯ ಸಂಘಟನೆಗಳ ಪಾತ್ರ ಮಹತ್ತರವಾದುದು ಎಂದು ಪ್ರಗತಿಪರ ಕೃಷಿಕ, ಧಾರ್ಮಿಕ, ಸಾಮಾಜಿಕ ಮುಖಂಡ ಶ್ರೀಕೃಷ್ಣ ಭಟ್ ಪುದುಕೋಳಿ ತಿಳಿಸಿದರು.

               ನೀರ್ಚಾಲು ಸಮೀಪದ ಪುದುಕೋಳಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಿವೇಕಾನಂದ ಪ್ರೆಂಡ್ಸ್ ಕ್ಲಬ್ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಕ್ಲಬ್ ಅಧ್ಯಕ್ಷ ವೈಷ್ಣವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಉದಯ, ಕಾರ್ಯದರ್ಶಿ ತಿಲಕ್ ರಾಜ್, ಜೊತೆಕಾರ್ಯದರ್ಶಿ ಪ್ರಜುನ್, ಕೋಶಾಧಿಕಾರಿ ವಿಜಯ ಮೊದಲಾದವರು ಉಪಸ್ಥಿತರಿದ್ದರು. ವೈಷ್ಣವ್ ಸ್ವಾಗತಿಸಿ, ಪ್ರಜುನ್ ವಂದಿಸಿದರು. ತಿಲಕ್ ರಾಜ್ ಕಾರ್ಯಕ್ರಮ ನಿರೂಪಿಸಿದರು.


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries