HEALTH TIPS

ಆಪರೇಷನ್ ಗಂಗಾ: ಕಾಸರಗೋಡು ಸಹಿತ ವಿವಿಧ ಜಿಲ್ಲೆಗಳ 11 ಕೇರಳೀಯರು ರಾತ್ರಿ ರಾಜ್ಯಕ್ಕೆ


       ಕಣ್ಣೂರು: ಆಪರೇಷನ್ ಗಂಗಾ ಭಾಗವಾಗಿ ಉಕ್ರೇನ್‌ನಲ್ಲಿ ಸಿಲುಕಿರುವ ಇನ್ನೂ 11 ಮಂದಿ ಕೇರಳೀಯ ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಿದ್ದಾರೆ.  ಅವರು ಕಣ್ಣೂರು ವಿಮಾನ ನಿಲ್ದಾಣದಲ್ಲಿ ನಿನ್ನೆ ಮಧ್ಯೆರಾತ್ರಿ ಬಂದಿಳಿದರು.  ಈ ತಂಡದಲ್ಲಿ ಕಣ್ಣೂರು, ಕೋಯಿಕ್ಕೋಡ್, ಮಲಪ್ಪುರಂ, ಕಾಸರಗೋಡು ಮತ್ತು ವಯನಾಡ್‌ನ ಜನರು ಸೇರಿದ್ದಾರೆ.
       12.30ಕ್ಕೆ ವಿದ್ಯಾರ್ಥಿಗಳು ಕಣ್ಣೂರು ತಲುಪಿದರು.  ಗಂಗಾ ಕಾರ್ಯಾಚರಣೆಯ ಭಾಗವಾಗಿ ವಿದ್ಯಾರ್ಥಿಗಳು ದೆಹಲಿಯಿಂದ ಕಣ್ಣೂರಿಗೆ ವಿಮಾನದಲ್ಲಿ ಬಂದಿಳಿದರು.
       ಈ ನಡುವೆ ನಿನ್ನೆ ಎರಡು ವಿಮಾನಗಳಲ್ಲಿ 36 ಮಲಯಾಳಿ ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಿದ್ದಾರೆ.  ಮೊದಲ ವಿಮಾನವು ಕೊಚ್ಚಿಯಲ್ಲಿ 25 ಪ್ರಯಾಣಿಕರನ್ನು ತಂದಿಳಿಸಿತು ಮತ್ತು ಎರಡನೇ ವಿಮಾನವು ತಿರುವನಂತಪುರಂನಲ್ಲಿ 11 ಪ್ರಯಾಣಿಕರನ್ನು ತಂದಿಳಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries