HEALTH TIPS

ಡಾ.ವಾಣಿಶ್ರೀ ಕಾಸರಗೋಡು ಅವರ ಪ್ರಕೃತಿ ಕೃತಿ ಬಿಡುಗಡೆ

                  ಬದಿಯಡ್ಕ: ನೆಲ್ಲಿಕ್ಕಟ್ಟೆಯ ಚೂರಿಪ್ಪಳ್ಳ ಪ್ರಕೃತಿ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ವಾಣಿಶ್ರೀ ಕಾಸರಗೋಡು ಇವರ ಸ್ವರಚಿತ " ಪ್ರಕೃತಿ " ಕೃತಿ ಬಿಡುಗಡೆ ಕಾರ್ಯಕ್ರಮ ಅವರ ಶ್ರೀಗಿರಿ ನಿವಾಸದಲ್ಲಿ ಜರುಗಿತು. 

               ಸಮಾರಂಭವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ್ ತಂತ್ರಿ ಉದ್ಘಾಟಿಸಿದರು. ಕ.ಸಾ.ಪ ಗಡಿನಾಡ ಘಟಕಾಧ್ಯಕ್ಷ ಎಸ್ ವಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದ್ಯ ಡಾ. ಶ್ರೀನಿಧಿ ಸರಳಾಯ  ಕೃತಿ ಬಿಡುಗಡೆಗೊಳಿಸಿದರು. ಸಾಹಿತಿ, ಪತ್ರಕರ್ತ  ರಾಧಾಕೃಷ್ಣ ಕೆ ಉಳಿಯತ್ತಡ್ಕ ಕೃತಿ ಪರಿಚಯ ಮಾಡಿದರು. ಸಮಾರಂಭದಲ್ಲಿ ಕ.ಸಾ.ಪ ಮಾಜೀ ಅಧ್ಯಕ್ಷ ಹಿರಿಯ ನ್ಯಾಯವಾದಿ, ಸಂಘಟಕ ಐ ವಿ ಭಟ್  ಹಾಗೂ ಹಿರಿಯ ಸಾಹಿತಿ ಆಶು ಕವಿ ಪೆÇಟ್ಟಿಪ್ಪಲ ನಾರಾಯಣ ಭಟ್ ಅವರನ್ನು ಗೌರವಿಸಲಾಯಿತು. 


              ಡಾ. ಶೇಖರ್ ಅಜೆಕಾರ್ ಮಾಧ್ಯಮ,ಡಾ. ಸುರೇಶ್ ನೆಗಳಗುಳಿ ವೈದ್ಯಕೀಯ ಮತ್ತು ಸಾಹಿತ್ಯ, ರೆಮಂಡ್  ಡಿಕೂನಾ ಪತ್ರಕರ್ತ ಇವರನ್ನು ಪ್ರಕೃತಿ ರತ್ನ ಗೌರವ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.  ವೆಂಕಟ ಕೃಷ್ಣ ಎಡನೀರು, ಪ್ರೊ.ಪಿ ಎನ್ ಮೂಡಿತ್ತಾಯ, ವಿ ಬಿ ಕುಳವರ್ಮ, ರಘುನಂದನ್ ಭಟ್ ಉಪಸ್ಥಿತರಿದ್ದರು. ಡಾ. ವೆಂಕಟ ಗಿರೀಶ್ ಪೆÇಟ್ಟಿಪ್ಪಲ ಇವರು ಗಣ್ಯರಿಗೆ ಶಾಲು ಹೊದಿಸಿ ಗೌರವಿಸಿದರು. ಪ್ರಣಮ್ಯ ಗೌರಿ ನಿರೂಪಿಸಿದರು. ಗುರುರಾಜ್ ಎಮ್ ಆರ್ ಕಾಸರಗೋಡು ವಂದಿಸಿದರು. 

           ಬಳಿಕ ನಡೆದ ಕವಿಗೋಷ್ಠಿಯಲ್ಲಿ ಹಲವಾರು ಕವಿಗಳು ಭಾಗವಹಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಹಲವಾರು ಗಾಯಕ ಗಾಯಕಿಯರು ತಮ್ಮ ಸುಮಧುರ ಕಂಠ ಸಿರಿಯಿಂದ ಹಾಡಿ ರಂಜಿಸಿದರು. ಕಾಸರಗೋಡಿನಲ್ಲಿ ಕನ್ನಡ ಭಾಷೆಯ ಆಸ್ತಿತ್ವದ ಬಗ್ಗೆ ವಿಚಾರಗೋಷ್ಠಿ ಜರುಗಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries