ನವದೆಹಲಿ: ಯುದ್ಧಪೀಡಿತ ಪೂರ್ವ ಉಕ್ರೇನಿಯನ್ ನಗರವಾದ ಸುಮಿಯಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದು ಉಕ್ರೇನ್ನ ಭಾರತೀಯ ರಾಯಭಾರಿ ಪಾರ್ಥ ಸತ್ಪತಿ ಹೇಳಿದ್ದಾರೆ.
ಸುಮಿಯಲ್ಲಿರುವ ಭಾರತೀಯ ವಿದ್ಯಾರ್ಥಿಗಳು ರಷ್ಯಾದ ಗಡಿಗೆ ತೆರಳಲು ನಿರ್ಧರಿಸಿದ್ದಾರೆ ಮತ್ತು ಅವರಿಗೆ ಏನಾದರೂ ಸಂಭವಿಸಿದರೆ ಭಾರತ ಸರ್ಕಾರ ಮತ್ತು ಉಕ್ರೇನ್ನಲ್ಲಿರುವ ರಾಯಭಾರ ಕಚೇರಿ ಹೊಣೆ ಎಂದು ಹೇಳುವ ವೀಡಿಯೊಗಳನ್ನು ಪೋಸ್ಟ್ ಮಾಡಿದ ಗಂಟೆಗಳ ನಂತರ ಬಂದ ಸಂದೇಶದಲ್ಲಿ ಸತ್ಪತಿ ಈ ಹೇಳಿಕೆಯನ್ನು ನೀಡಿದ್ದಾರೆ.
ರಾಯಭಾರ ಕಚೇರಿಯ ಭರವಸೆಯ ನಂತರ ಪೂರ್ವ ಉಕ್ರೇನಿಯನ್ ನಲ್ಲಿರುವ ವಿದ್ಯಾರ್ಥಿಗಳು ಅಲ್ಲಿಯೇ ತಂಗಿದ್ದಾರೆ, ಕಳೆದ ಎರಡು ವಾರಗಳು ನಮಗೆಲ್ಲರಿಗೂ ಅತ್ಯಂತ ದುಃಖಕರ ಮತ್ತು ಸವಾಲಿನದ್ದಾಗಿತ್ತು. ನಮ್ಮ ಜೀವನದಲ್ಲಿ ಇಂತಹ ನೋವು ಮತ್ತು ಅಡೆತಡೆಗಳನ್ನು ಯಾರೂ ನೋಡಿರಲಿಲ್ಲ ಎಂದು ಸತ್ಪತಿ ಹೇಳಿದರು.
ಅದೇನೇ ಇದ್ದರೂ, ಈ ಕಷ್ಟದ ಸಮಯದಲ್ಲಿ ಧೈರ್ಯಶಾಲಿಯಾಗಿರಲು ನಮ್ಮ ಭಾರತೀಯ ಪ್ರಜೆಗಳು, ವಿಶೇಷವಾಗಿ ಯುವ ಭಾರತೀಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಪ್ರಬುದ್ಧತೆ ಮತ್ತು ಸ್ಥೈರ್ಯದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
“ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರವನ್ನು ಖಚಿತಪಡಿಸಿಕೊಳ್ಳಲು ನಮ್ಮ ರಾಯಭಾರ ಕಚೇರಿಯು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಈ ಸಮಯದಲ್ಲಿ ನಮ್ಮ ವಿದ್ಯಾರ್ಥಿಗಳು ಬಹಳಷ್ಟು ಅನುಭವಿಸಿದ್ದಾರೆ ಮತ್ತು ಸಾಟಿಯಿಲ್ಲದ ಶಕ್ತಿ ಮತ್ತು ನಿರ್ಣಯವನ್ನು ತೋರಿಸಿದ್ದಾರೆ ಎಂದು ನನಗೆ ತಿಳಿದಿದೆ ಎಂದು ಟ್ವೀಟ್ ಮಾಡಿದ್ದಾರೆ. ನಿಮ್ಮ ಸುರಕ್ಷತೆಯೇ ನಮಗೆ ಪ್ರಮುಖವಾದದ್ದು, ಹೀಗಾಗಿ ಸ್ವಲ್ಪ ಸಹನೆ
ಮತ್ತು ತಾಳ್ಮೆಯಿಂದಿರಬೇಕೆಂದು ಮನವಿ ಮಾಡಿದ್ದಾರೆ.




