ತಿರುವನಂತಪುರ: ತಿರುವಾಂಕೂರು ದೇವಸ್ವಂ ಮಂಡಳಿ ಅಧೀನದಲ್ಲಿರುವ ದೇವಾಲಯಗಳ ಹಕ್ಕುಬಾಧ್ಯತೆ ಇಲ್ಲದ ಭೂಮಿಯನ್ನು ವಾಪಸ್ ಪಡೆಯಲು ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಗೌರಿ ಪಾರ್ವತಿಬಾಯಿ ಮತ್ತು ಲಕ್ಷ್ಮೀಬಾಯಿ ಆಗ್ರಹಿಸಿದ್ದಾರೆ. ದೇವಾಲಯಗಳಲ್ಲಿನ ಆಚರಣೆಗಳನ್ನು ಉಳಿಸಬೇಕು ಎಂದು ಅವರು ಹೇಳಿದರು.
ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಶ್ರೀ ಚಿತ್ತಿರಿತಿರುನಾಳ್ ಮಹಾರಾಜರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಅಡ್ವ. ಕೆ. ಅನಂತಪದ್ಮನಾಭ, ಸದಸ್ಯ ತಂಗಪ್ಪನ್ ಅವರು ಕವಡಿಯಾರ್ ಅರಮನೆ ಸಂದರ್ಶಿಸಿದ ತಿರುವಾಂಕೂರ್ ರಾಜ ಕುಟುಂಬದ ಪುಯಂತಿರುನಾಳ್ ಗೌರೀ ಪಾರ್ವತೀ ಬಾಯಿ, ಅ|ಶ್ವತಿ ತಿರುನಾಳ್ ಗೌರಿ ಲಕ್ಷ್ಮೀ ಬಾಯಿ ಅವರೊಂದಿಗೆ ಮಾತುಕತೆ ನಡೆಸಿದರು.
ದೇವಸ್ವಂ ಬೋರ್ಡ್ ಕಮಿಷನರ್ ರಾಜೇಂದ್ರ ಪ್ರಸಾದ್, ಖಾಸಗಿ ಕಾರ್ಯದರ್ಶಿ ಹರಿಕುಮಾರ್, ಪಿಆರ್ಒ ಸುನೀಲ್ ಅರುಮನೂರ್ ಉಪಸ್ಥಿತರಿದ್ದರು.


