ಕೊಚ್ಚಿ: ಹಲವು ವರ್ಷಗಳ ಹಿಂದೆ ನಡೆದ ಕಿರುಕುಳವನ್ನು ಸಹಿಸಿಕೊಂಡು ಕೊನೆಗೆ ಬಹಿರಂಗಗೊಳಿಸುವ ಬಗ್ಗೆ ತನಗೆ ಆಸಕ್ತಿ ನನಗಿಲ್ಲ ಎಂದು ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಮಹಿಳಾ ದಿನಾಚರಣೆಯಂದು ಮಲಯಾಳಂ ಚಲನಚಿತ್ರ ಕಾರ್ಯಕರ್ತರ ಸಂಘಟನೆಯಾದ "ಅಮ್ಮ" ಆಯೋಜಿಸಿದ್ದ ಆರ್ಜವ 2022 ಕೊಚ್ಚಿಯ ಉದ್ಘಾಟನಾ ಸಮಾರಂಭದಲ್ಲಿ ಶೈಲಜಾ ಮಾತನಾಡಿದರು. ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ತಕ್ಷಣ ಸ್ಪಂದಿಸಬೇಕು. ಅದಕ್ಕಾಗಿ ಮಹಿಳೆಯರು ಶಕ್ತಿ ಪ್ರದರ್ಶಿಸಬೇಕು ಎಂದರು.
ಒಂದು ವಿಷಯಕ್ಕೆ ನಾನು ವಿರೋಧಿ’ ಎಂದು ಮಾತು ಆರಂಭಿಸಿದ ಶೈಲಜಾ ಅವರು ಕೆಲವು ವರ್ಷಗಳಿಂದ ನನಗೆ ಕಿರುಕುಳ ನೀಡಿದ್ದಾರೆ ಎಂದು ಕೆಲವರು ಹೇಳುವುದನ್ನು ನಾನು ಕೇಳಿದ್ದೇನೆ. ದೂರು ದಾಖಲಿಸಲು ವರ್ಷಗಳೇಕೆ ಕಾಯಬೇಕು? ಅಹಿತಕರ ನೋಟ, ಪದ ಅಥವಾ ಸ್ಪರ್ಶ ಇದ್ದರೆ, ಕೂಡಲೇ ಬಹಿರಂಗಗೊಳಿಸಿ. ಆ ಉತ್ಸಾಹವನ್ನು ಮಹಿಳೆಯರು ತೋರಬೇಕು. ನಾವು ಮಾತನಾಡಲು ಮತ್ತು ಅದನ್ನು ಎದುರಿಸಲು ಸಿದ್ಧರಿಲ್ಲದಿದ್ದರೆ, ನಾವು ಶಿಕ್ಷಣವನ್ನು ಏಕೆ ಪಡೆದಿದ್ದೇವೆ? ಮಹಿಳೆಯರು ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಮಾಜದ ಅನಿಷ್ಟಗಳ ವಿರುದ್ಧ ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ನಿಲ್ಲಬೇಕು' ಎಂದು ಕೆ.ಕೆ.ಶೈಲಜಾ ಹೇಳಿದರು.
ಇದೇ ವೇಳೆ ಶೈಲಜಾ ಅವರ ಮಾತು ಮೀಟೂ ವಿರೋಧಿ ಎಂಬ ಟೀಕೆ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಶೈಲಜಾ ಅವರು ನಟಿ ಭಾವನಾ ಅವರ ನಿಷ್ಠುರತೆಯನ್ನು ಶ್ಲಾಘಿಸಿದರು. ಹೆಣ್ಣುಮಕ್ಕಳು ತಾನು ಬಲಿಪಶು ಅಲ್ಲ, ಬದುಕುಳಿದವಳೇ ಎಂದು ಬಹಿರಂಗವಾಗಿ ಹೇಳುತ್ತಿರುವುದು ದೊಡ್ಡ ಬದಲಾವಣೆಯಾಗಿದೆ ಎಂದು ಶೈಲಜಾ ತಿಳಿಸಿದರು ಮತ್ತು ಮಹಿಳಾ ಸಮಸ್ಯೆಗಳಿಗೆ ಸ್ಟಾರ್ ಸಂಸ್ಥೆಗಳು ದನಿಯೆತ್ತಬೇಕು ಎಮದಿರುವರು.




