HEALTH TIPS

ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವಕ್ಕೆ ಚಾಲನೆ: ವೇದಿಕೇತರ ಸ್ಪರ್ಧೆಗಳ ಆರಂಭ

               ಕಾಸರಗೋಡು: ಐದು ದಿನÀಗಳ ಕಾಲ ನಡೆಯಲಿರುವ ಕಣ್ಣೂರು ವಿಶ್ವ ವಿದ್ಯಾಲಯ ವ್ಯಾಪ್ತಿಯ ಕಾಲೇಜು ಕಲೋತ್ಸವಕ್ಕೆ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಬುಧವಾರ ಚಾಲನೆ ನೀಡಲಾಯಿತು.

              ಕತೆಗಾರ, ಪತ್ರಕರ್ತ ಪ್ರಮೋದ್ ರಾಜನ್ ವೇದಿಕೇತರ ಕಾರ್ಯಕ್ರಮ ಉದ್ಘಾಟಿಸಿದರು. ಚಿತ್ರನಟ ಉಣ್ಣಿರಾಜ್ ಚೆರ್ವತ್ತೂರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಣ್ಣೂರು ವಿಶ್ವ ವಿದ್ಯಾಳಯ ಉಪಕುಲಪತಿ ಡಾ. ಸಾಬು ಅಬ್ದುಲ್ ಹಮೀದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯೂನಿಯನ್ ಅಧ್ಯಕ್ಷ ಡಾ. ಎಂ.ಕೆ ಹಸನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎ ನೆಲ್ಲಿಕುನ್ನು, ನಗರಸಭಾ ಸದಸ್ಯೆ ಸವಿತಾ ಟೀಚರ್, ಸಿಂಡಿಕೇಟ್  ಸದಸ್ಯ ಎಂ.ಸಿ ರಾಜು, ಎ.ಅಶೋಕನ್,. ಎ.ಶ್ರೀಲೇಖ, ಡಾ. ಟಿ.ಪಿ ನಫೀಸಾ ಬೀಬಿ, ಡಾ. ಕೆ.ಕೆ ಹರಿಪುರುಪ್, ಡಾ. ಕೆ. ವಿಜಯನ್, ಅರ್ಜುನನ್ ತಾಯಲಂಗಾಡಿ, ಎಮ್. ಎ ಅಬೂಬಕ್ಕರ್ ಉಪಸ್ಥಿತರಿದ್ದರು. ಇದೇ ಸಂದರ್ಭ ನೋಂದಾವಣಾ ಕಚೇರಿಯನ್ನು ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ರಿಜಿಸ್ಟ್ರೇಶನ್ ಸಮಿತಿ ಕನ್ವೀನರ್ ಡಾ. ದಿವ್ಯಾ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ವಿವಿ ಯೂನಿಯನ್ ಕಾರ್ಯದರ್ಶಿ ಕೆ.ವಿ ಶಿಲ್ಪಾ, ಪ್ರೋಗ್ರಾಮ್ ಕಮಿಟಿ ಕನ್ವೀನರ್ ಡಾ. ಆಸಿಫ್ ಇಕ್ಬಾಲ್ ಉಪಸ್ಥಿತರಿದ್ದರು. 

            ವಿವಿ ವ್ಯಾಪ್ತಿಯ 140ಕಾಲೇಜುಗಳ ನಾಲ್ಕು ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳು 120ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವರು. ಮಾ 23ರಿಂದ 27ರ ವರೆಗೆ ವಿಶ್ವ ವಿದ್ಯಾಲಯ ಕಲೋತ್ಸವ ನಡೆಯಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries