HEALTH TIPS

ಕೋಝಿಕ್ಕೋಡ್‍ನಲ್ಲಿ ಪೆಟ್ರೋಲ್ ಪಂಪ್‍ಗಳನ್ನು ತೆರೆಯಲು ಜಿಲ್ಲಾಧಿಕಾರಿ ಕರೆ; ಪೋಲೀಸ್ ರಕ್ಷಣೆ ನೀಡುವ ಭರವಸೆ

                                              

                      ಕೋಝಿಕ್ಕೋಡ್: ಕೋಝಿಕ್ಕೋಡ್ ಜಿಲ್ಲಾಧಿಕಾರಿ ಡಾ.ಎಸ್.ಎಸ್. ಎನ್. ತೇಜ್ ಲೋಹಿತ್ ರೆಡ್ಡಿ ಅವರು ಮುಷ್ಕರದಿಂದ ಆಂಬ್ಯುಲೆನ್ಸ್ ಹಾಗೂ ಇತರೆ ಸೇವಾ ವಾಹನಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

                 ಮುಷ್ಕರದ ಪರಿಣಾಮವಾಗಿ ಆಂಬ್ಯುಲೆನ್ಸ್,  ಇತರ ತುರ್ತು ಸೇವೆಗಳು ಡೀಸೆಲ್ ಮತ್ತು ಪೆಟ್ರೋಲ್ ಇಲ್ಲದೆ ಪರದಾಡುತ್ತಿವೆ.  ಮಾನವೀಯ ಧೋರಣೆಯೊಂದಿಗೆ ಆಂಬ್ಯುಲೆನ್ಸ್ ಮತ್ತು ಇತರ ಅಗತ್ಯ ಸೇವಾ ವಾಹನಗಳಿಗೆ ಇಂಧನ ಪೂರೈಸಲು ಪೆಟ್ರೋಲ್ ಪಂಪ್ ಮಾಲೀಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಪೆಟ್ರೋಲ್ ಪಂಪ್‍ಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೋಲೀಸರಿಗೆ ಸೂಚಿಸಲಾಗಿದೆ ಎಂದರು.

                    ಎರಡು ದಿನಗಳ ರಾಷ್ಟ್ರೀಯ ಮುಷ್ಕರದ ಹೊರತಾಗಿಯೂ, ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ಸೇವೆಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ. ಆದರೆ, ಪೆಟ್ರೋಲ್ ಪಂಪ್‍ಗಳೂ ಮುಷ್ಕರ ನಡೆಸಿದ್ದರಿಂದ ಇಂಧನ ತುಂಬಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪಂಪ್ ಗಳನ್ನು ತೆರೆದಿಡುವಂತೆ ಕೋಝಿಕ್ಕೋಡ್ ಜಿಲ್ಲಾಧಿಕಾರಿ ಸೂಚಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries