ಸಮರಸ ಚಿತ್ರಸುದ್ದಿ: ಬದಿಯಡ್ಕ: ಮಾನ್ಯ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಭಾನುವಾರ ಮಾನ್ಯ ಪಡುಮನೆ ಶ್ರೀ ಮೂವರ್ ದೈವಗಳ ಭಂಡಾರ ಮನೆಯಲ್ಲಿ ಜರಗಿತು. ಸಮಿತಿ ಅಧ್ಯಕ್ಷ ಕಾರ್ಮಾರು ನರಸಿಂಹ ಭಟ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹನ್ನೆರಡು ವರ್ಗದವರು ಹಾಗೂ ವಿಲೇದಾರರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಒತ್ತೆಕೋಲ ಮಹೋತ್ಸವ ಏ.1 ಹಾಗೂ 2 ರಂದು ನಡೆಯಲಿದೆ.