ಕುಂಬಳೆ: ಕಾನಮಠ ಶ್ರೀ ಶಂಕರನಾರಾಯಣ ಸನ್ನಿಧಿಯಲ್ಲಿ ವರ್ಷಾವಧಿ ಹೊಸ್ತನ ದೇವಕಾರ್ಯ ಮತ್ತು ಶ್ರೀಧೂಮಾವತೀ ದೈವದ ಪುದ್ವಾರು ಕೋಲ ಮಾ. 5 ಹಾಗೂ 6 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮಾ.4 ರಂದು ಬೆಳಿಗ್ಗೆ 10 ಕ್ಕೆ ಕೊಪ್ಪರಿಗೆ ಮುಹೂರ್ತ ನಡೆಯಲಿದೆ. 5 ರಂದು ಬೆಳಿಗ್ಗೆ 8 ಕ್ಕೆ ಶ್ರೀರುದ್ರ ಪಠಣ, 10.30 ಕ್ಕೆ ತುಲಾಭಾರ ಸೇವೆ, 11 ಕ್ಕೆ ಮಹಾಪೂಜೆ, ಸಂಜೆ 6 ರಿಂದ ಯಕ್ಷ ವಿಹಾರ ಬದಿಯಡ್ಕ ತಂಡದವರಿಂದ ಯಕ್ಷಗಾನ ತಾಳಮದ್ದಳೆ, 7.30 ರಿಂದ ಭಂಡಾರ ಮನೆಯಿಂದ ಶ್ರೀಧೂಮಾವತಿ ದೈವದ ಭಂಡಾರ ಹೊರಟು ದೈವಸ್ಥಾನದಲ್ಲಿ ತಂಬಿಲ, ಶ್ರೀಮಠದಲ್ಲಿ ಶ್ರೀಶಂಕರನಾರಾಯಣ ದೇವರಿಗೆ ಮಹಾಪೂಜೆ ನಡೆಯಲಿದೆ. 6 ರಂದು ಬೆಳಿಗ್ಗೆ 9.30 ಕ್ಕೆ ಶ್ರೀಧೂಮಾವತಿ ದೈವದ ಕೋಲ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.