ಪತ್ತನಂತಿಟ್ಟ: ಡಿವೈಎಫ್ ಐ ರಾಜ್ಯ ಸಮ್ಮೇಳನದಲ್ಲಿ ಸಚಿವ ಮೊಹಮ್ಮದ್ ರಿಯಾಝ್ ಹಾಗೂ ಅಖಿಲ ಭಾರತ ಅಧ್ಯಕ್ಷ ಎ.ಎ.ರಹೀಮ್ ವಿರುದ್ಧ ಟೀಕೆ ವ್ಯಕ್ತಪಡಿಸಲಾಗಿದೆ. ಈ ಇಬ್ಬರು ನಾಯಕರು ಸಂಘಟನೆಯಲ್ಲಿ ವೈಯಕ್ತಿಕ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಮೊಹಮ್ಮದ್ ರಿಯಾಜ್, ಎಎ ರಹೀಮ್ ಮತ್ತು ಎಸ್ ಸತೀಶ್ ಸಂಘಟನೆಯ ಒಟ್ಟು ವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ಪ್ರತಿನಿಧಿಗಳು ಆರೋಪಿಸಿದರು.
ಈ ಹಿಂದೆ ಆತ್ಮವಿಮರ್ಶೆ ಮಾಡಿಕೊಂಡಿರುವ ಸಂಘಟನೆ ಈ ಬಾರಿ ಅಂತಹ ಆತ್ಮಾವಲೋಕನ ನಡೆಸಿಲ್ಲ ಎಂದು ಕೆಲ ಪ್ರತಿನಿಧಿಗಳು ಆರೋಪಿಸಿದರು. ಸಂಘಟನೆಯ ನೆಪದಲ್ಲಿ ಡ್ರಗ್ಸ್ ಮಾಫಿಯಾ, ಗೂಂಡಾಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಟೀಕೆಯೂ ಚರ್ಚೆಗೆ ಗ್ರಾಸವಾಗಿದ್ದು, ಕೆಲವರು ಸಂಘಟನೆ ಹೆಸರಲ್ಲಿ ತಮ್ಮ ಅಗತ್ಯಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.