ತಿರುವನಂತಪುರಂ: ಇಡುಕ್ಕಿ ನೆಡುಂಕಂಡಂ ತೂಕ್ಕುಪಾಲಂ ಎಂಬಲ್ಲಿ ಮೀನು ಪದಾರ್ಥ ಸೇವಿಸಿದವರಿಗೆ ಹೊಟ್ಟೆನೋವು ಕಾಣಿಸಿಕೊಂಡು, ಹಸಿರು ಮೀನು ತಿಂದು ಬೆಕ್ಕುಗಳು ಸಾವನ್ನಪ್ಪಿವೆ ಎಂಬ ಸುಳ್ಳುಸುದ್ದಿ ಹರಡಿದವರ ಪತ್ತೆಗೆ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸೂಚಿಸಿದ್ದಾರೆ.
ಈ ಸಂಬಂಧ ಆಹಾರ ಸುರಕ್ಷತಾ ಆಯುಕ್ತರಿಗೆ ವೀಣಾ ಜಾರ್ಜ್ ನಿರ್ದೇಶನ ನೀಡಿದ್ದಾರೆ. ಸಚಿವರ ನಿರ್ದೇಶನದ ಮೇರೆಗೆ ಆಹಾರ ಸುರಕ್ಷತಾ ಇಲಾಖೆ ಇಂದು ಪರಿಶೀಲನೆ ನಡೆಸಿ ಮಾದರಿ ಸಂಗ್ರಹಿಸಲಿದೆ. ಮೀನುಗಳಿಗೆ ಹಾನಿಯಾಗದಂತೆ ತಡೆಯಲು ರಾಸಾಯನಿಕಗಳನ್ನು ಬಳಸುವ ಮೀನು ವ್ಯಾಪಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲೂ ಸಚಿವರು ತಿಳಿಸಿರುವರು.